ಕೃಷಿಯು ಮಾನವ ಕುಲದ ಮೊಟ್ಟ ಮೊದಲ ಕಸಬು. ಹಾಗೂ ಮಾನವನು ಕೃಷಿಯನ್ನು ಆರಂಭಿಸಿದ ಮೊದಲ ದಿನದಿಂದ ನಾಗರಿಕತೆಗಳು ಕೂಡಾ ಆರಂಭವಾದವು. ಕೃಷಿ ಎಂದರೆ ಭೂಮಿಯನ್ನು ಉಳುಮೆ ಮಾಡಿ ಬೆಳೆಯನ್ನು ಬೆಳೆಯುವ ಕಲೆ ಎಂದು ಪರಿಗಣಿಸಲಾಗುತ್ತದೆ. ಭಾರತವು ಕೃಷಿ ಪ್ರಧಾನ ರಾಷ್ಟ್ರ. ಹಾಗೂ ಭಾರತದಲ್ಲಿ ಕೃಷಿಯ ಇತಿಹಾಸ ಋಗ್ವೇದ ಕಾಲದಷ್ಟು ಹಳೆಯದು. ಭಾರತ ಇಂದು ಕೃಷಿ ಉತ್ಪಾದನೆಯಲ್ಲಿ ವಿಶ್ವಾದ್ಯಂತ ಎರಡನೇ ಸ್ಥಾನದಲ್ಲಿದೆ. ಕೃಷಿಯು ಎಲ್ಲ ಶಾಸ್ತ್ರಗಳಿಗೂ ತಾಯಿ ಸ್ವರೂಪವಾಗಿದ್ದು, ಮಾನವ ಸಂಸ್ಕೃತಿಯ ಮೂಲವಾಗಿದೆ. ಭಾರತೀಯ ಕೃಷಿಯು ಅತಿ ಸಮೃದ್ಧ ಇತಿಹಾಸವನ್ನು ಹೊಂದಿರುವುದು ನಮಗೆಲ್ಲ ಇತಿಹಾಸದಿಂದ ತಿಳಿದುಬಂದಿದೆ. ಆರ್ಯರ ಮತ್ತು ಸಿಂಧೂ ಕಣಿವೆಯ ನಾಗರಿಕತೆಯ ಸಮಯದಲ್ಲೂ ಕೃಷಿಯನ್ನು ಹೇರಳವಾಗಿ ಮಾಡಲಾಗುತ್ತಿತ್ತು.
ಹೀಗೆ ಪ್ರಾಚೀನಕಾಲದಿಂದಲೂ ಕೃಷಿಯು ನಮ್ಮ ದೇಶದ ಬೆನ್ನೆಲುಬು ಹಾಗೂ ನಮ್ಮ ರೈತರ ಜೀವನಾಧಾರದ ಕಸುಬು. ದುರಾದೃಷ್ಟಕರ ಸಂಗತಿ ಎಂದರೇ 1991ರಲ್ಲಿ ಜಾಗತೀಕರಣ ಆದ ನಂತರ ಕೃಷಿಯ ಕುರಿತು ಕೆಲವು ರೈತರಲ್ಲಿ ಏನೋ ಒಂದು ತಾತ್ಸಾರ ಮನೋಭಾವ ಬೆಳೆಯುತ್ತಿದೆ. ವಿದೇಶೀ ಹೂಡಿಕೆದಾರರು ರೈತರ ಭೂಮಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿದಷ್ಟು ಕೃಷಿ ಭೂಮಿ ಕಡಿಮೆ ಆಗುತ್ತಿದೆ. ರೈತರು ತಮ್ಮ ಮಕ್ಕಳನ್ನು ಕೃಷಿ ಮಾಡುವುದನ್ನು ಬಿಡಿಸಿ ಕೆಲಸ ಮಾಡಲು ಕೈಗಾರಿಕೆಗಳಿಗೆ ಕಳಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವಿದೇಶೀ ಬಂಡವಾಳ ಹೂಡಿಕೆದಾರರು ಹೇಳಿದ ಹಾಗೆ ಕೇಳಿಕೊಂಡು ಈ ಕೈಗಾರಿಕೆಗಳಲ್ಲಿ ಕೆಲಸ ಮಾಡಿ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಕೆಡಿಸಿಕೊಳ್ಳುವುದಕ್ಕಿಂತ ಅಧುನಿಕ ಕೃಷಿಯ ಕುರಿತು ಸರಿಯಾಗಿ ತಿಳಿದುಕೊಂಡು ನಿಸರ್ಗದ ಮಡಿಲಲ್ಲಿ ಕೆಲಸ ಮಾಡಿ ಚಿನ್ನದಂತಹ ಬೆಳೆಯನ್ನು ಬೇಕಾದರೂ ಮಣ್ಣಿನಲ್ಲಿ ಬೆಳೆದು ಬಿಡಬಹುದು ಎಂಬ ಸಂಗತಿಯನ್ನು ಕೈಗಾರಿಕೆಗಳಲ್ಲಿ ಕೆಲಸ ಮಾಡುವ ರೈತರ ಮಕ್ಕಳು ಅರ್ಥ ಮಾಡಿಕೊಳ್ಳಬೇಕು.
ಇವತ್ತಿನ ದಿನ ಬೆಳೆದ ಬೆಳೆಗೆ ಸೂಕ್ತವಾದ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ವ್ಯಾಪಾರೋದ್ಯಮದ ಜ್ಞಾನವನ್ನು ರೈತರಿಗೆ ಮೂಡಿಸುವುದು ತುಂಬಾ ಅವಶ್ಯಕ ಇದೇ. ಇದರ ಜೊತೆಗೆ ಬೆಳೆಯನ್ನು ಹೇಗೆ ಸೌರಕ್ಷಣೆ ಮಾಡಿ ಇಡಬೇಕು ಎನ್ನುವದರ ಕುರಿತು ಅರಿವು ಮೂಡಿಸಬೇಕು. ಹಾಗೂ ಹಳ್ಳಿಗಾಡಿನಲ್ಲಿ ರೈತರು ಬೆಳೆದ ಬೆಳೆಯುನ್ನು ಹೆಚ್ಚಿನ ಪ್ರಮಾಣದಲ್ಲಿ ನೇರವಾಗಿ ಮೆಟ್ರೋ ನಗರಗಳನ್ನು ತಲುಪುವ ವ್ಯವಸ್ತೆಯನ್ನು ಕಲ್ಪಿಸಿಕೊಡುವುದರಿಂದ ಹಳ್ಳಿಗಾಡಿನ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಇಂಥ ಕಾರ್ಯಸೂಚಿಗಳನ್ನು ಇಟ್ಟುಕೊಂಡು ಕೆಲಸ ಮಾಡಿದರೆ ಮಾತ್ರ ರೈತರಿಗೆ ಅರ್ಥವಾಗಿ ಶಕ್ತಿ ತುಂಬಲು ಸಾಧ್ಯವಾಗುತ್ತದೆ.