Author: Anveshana

ಮಹಾಋಷಿ ಭರದ್ವಾಜ್ ವೈಮಾನಿಕ ಶಾಸ್ತ್ರ – ದಶಕಗಳ ಹಿಂದೆ ಆಫಘಾನಿಸ್ತಾನದ ಗುಹೆಯಲ್ಲಿ ಆಕಸ್ಮಿಕವಾಗಿ ಸಿಕ್ಕ 5 ಸಾವಿರ ವರ್ಷಗಳ ಹಿಂದಿನ ಕಾಲದ ವಿಮಾನವನ್ನು ಗುಹೆಯಿಂದ ಹೊರತರಲು ಪ್ರಯತಿಸಿದ ಅಮೆರಿಕಾದ 8 ಜನ ಮಿಲಿಟರಿ ಯೋಧರು ಕಣ್ಣಿಗೆ ಕಾಣದಂತೆ ಅದೃಶ್ಯರಾಗಿ ಹೋದರು. ಮಹಾಭಾರತದ ಕುರಿತು ನಂಬಿಕೆ ಇಲ್ಲದವರು ಹಾಗೂ ಎಲ್ಲದಕ್ಕೂ ವೈಜ್ಞಾನಿಕ ಆಧಾರ ಕೇಳುವ ನಾಸ್ತಿಕರು Ancient plane found in Afghanistan cave ಅಂತ ಒಂದು ಸತಿ ಗೂಗಲ್ ಸರ್ಚ್ ಕೊಟ್ಟುಬಿಡಿ! ಭಾರತದ ಪ್ರಾಚೀನ ಏರೋನಾಟಿಕ್ಸ್ ತಂತ್ರಜ್ಞಾನವು ಇವತ್ತಿನ ಸೈನ್ಸ್ ಆಫ್ ಏರೋನಾಟಿಕ್ಸ್ಗಿಂತಲೂ ಉನ್ನತವಾಗಿತ್ತು ಅನ್ನುವುದರಲ್ಲಿ ಸ್ವಲ್ಪವೂ ಅನುಮಾನವಿಲ್ಲ. ಐದು ಸಾವಿರ ವರ್ಷಗಳಿಗಿಂತ ಹಿಂದಿನಿಂದ ಭಾರತೀಯರಿಗೆ ಬೇರೆ ಬೇರೆ ರೀತಿಯ ವಿಮಾನಗಳ ಕುರಿತು ಅತ್ಯುನ್ನತ ತಂತ್ರಜ್ಞಾನ ಗೊತ್ತಿತ್ತು ಎಂಬುದು ಜಗತ್ತಿನ ಮುಂದುವರಿದ ರಾಷ್ಟ್ರವಾದ ಅಮೇರಿಕಾಗೆ ಅರ್ಥವಾಗಿದೆ. ಆದ್ದರಿಂದಲೇ ಅಮೆರಿಕಾ ಅಪಘಾನಿಸ್ತಾನದ ಗುಹೆಯಲ್ಲಿ ಸಿಕ್ಕ ವಿಮಾನದ ಕುರಿತು ಸಂಶೋಧನೆಗಳನ್ನು ಮಾಡುವ ಪ್ರಯತ್ನಗಳನ್ನು ಮಾಡಿತು. ಸ್ವತಃ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮ ಅವರು ರಹಸ್ಯವಾಗಿ…

Read More

ಈಗಿನ ಕಾಲದಲ್ಲಿ ಮಾಂಸಾಹಾರಕ್ಕೆ ವಿಪರೀತ ಬೇಡಿಕೆ ಇದೆ. ಭಾನುವಾರ ಬಂದ್ರೆ ಸಾಕು ” ಮನೆಯಲ್ಲಿ ವೀಕ್ ಎಂಡ್ ಸ್ಪೆಷಲ್ ಏನು? ಚಿಕನ್ ಮಾಡುತ್ತಿದ್ದೀರಾ? ಅಥವಾ ಮಟನ್ ಮಾಡುತ್ತಿದ್ದೀರಾ”? ಎಂದು ಪರಸ್ಪರ ಮತನಡಿಕೊಳ್ಳುವ, ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವ ವಾಡಿಕೆ ಪ್ರಸ್ತುತವಾಗಿ ಸಾಮಾನ್ಯವಾಗಿ ಹೋಗಿದೆ. ಇನ್ನು ಮಾಂಸಾಹಾರಿ ಹೋಟೆಲುಗಳಿಗೆ ಎಂಟ್ರಿ ಕೊಟ್ಟು ನೋಡಿದರೆ ಮೂರು ಸಂಜೆ ಸಮಯದಲ್ಲೂ ಜನ ಕುಳಿತು ಮಾಂಸಾಹಾರಿ ಊಟ ಹಾಗೂ ಜೊತೆಗೆ ಡ್ರಿಂಕ್ಸ್ ಅನ್ನು ಒಟ್ಟೊಟ್ಟಿಗೆ ಮಾಡುತ್ತಾ ನಡುಮಧ್ಯೆ ಯಾವತ್ತೂ ಯಾರಿಗೂ ಹೇಳದ ಭಾವನೆಗಳನ್ನು, ಜೀವನದ ವೈಯಕ್ತಿಕ ವಿಚಾರಗಳನ್ನು, ರಹಸ್ಯಗಳನ್ನು, ಕಷ್ಟ-ಸುಖಗಳನ್ನು, ತಮಗೇ ಅರಿವು ಇಲ್ಲದ ಹಾಗೆ ಪರಸ್ಪರ ಹಂಚಿಕೊಳ್ಳುತ್ತಾ ಲೈಫ್ ಎಂಜಾಯ್ ಮಾಡಬೇಕು ಎನುವ ವಿಲಕ್ಷಣ ಮೂಡಿನಲ್ಲಿ ತೇಲಿ ಮುಳುಗುತ್ತಿರುತ್ತಾರೆ. ಕಂಪನಿ ಕೆಲಸದಲ್ಲಿ ಇತ್ತೀಚಿಗೆ ಒತ್ತಡ ಹೆಚ್ಚಾಗುತ್ತಿದೆ ಹಾಗೂ ಕೆಲಸದ ಒತ್ತಡದಿಂದ ಮನಸಿಗೆ ಸುಸ್ತಾಗುತ್ತದೆ. ಬೇಜಾರು ಅನಿಸುತ್ತದೆ. ಮನಸ್ಸು ಖಿನ್ನತೆಗೊಳಗಾಗಿ ಯಾವುದರಲ್ಲಿಯೂ ಆಸಕ್ತಿ ಇಲ್ಲದೆ ಇರುವ ಸ್ಥಿತಿಗೆ ಒಳಗಾಗುತ್ತದೆ. ಹೀಗಾಗಿ ಮಲ್ಟಿನ್ಯಾಷನಲ್ ಕಂಪನಿಯ ಅನೇಕ ಉದ್ಯೋಗಿಗಳು ಮನಸನ್ನು ರಿಫ್ರೆಶ್…

Read More

ಪಂಚಮಹಾಭೂತಗಳಾದ ಗಾಳಿ (ಆಮ್ಲಜನಕ), ಅಗ್ನಿ (ಸೂರ್ಯನ ಬೆಳಕು), ನೀರು, ಭೂಮಿ (ಮಣ್ಣು) ಹಾಗೂ ಆಕಾಶ (ಸ್ಥಳ) ಇವು ಶುದ್ಧವಿದ್ದಷ್ಟು ಸಕಲ ಜೀವಿಗಳಿಗೆ ಆದರ್ಶ ಆರೋಗ್ಯ ಹಾಗೂ ದೀರ್ಘಾಯುಷ್ಯವು ಪ್ರಾಪ್ತಿಯಾಗುತ್ತದೆ. ಪಂಚಮಹಾಭೂತಗಳ ಶುದ್ಧತೆಗೆ ಅನುಗಣವಾಗಿ ಪರಿಸರ ವ್ಯವಸ್ಥೆಯು ಸಕಲ ಜೀವರಾಶಿಗಳಿಗೆ ಬಾಳಿ ಬದುಕಲು ಬೆಂಬಲವಾಗಿ ನಿಲ್ಲುತ್ತದೆ. ಪಂಚಮಹಾಭೂತಗಳು ಅಶುದ್ಧವಾದ್ದಷ್ಟು ಪರಿಸರ ವ್ಯವಸ್ಥೆ ಕೆಟ್ಟು ಹೋಗುತ್ತದೆ ಹಾಗೂ ಇದರಿಂದ ನಾವು ಅನಾರೋಗ್ಯದಿಂದ ಬಳಲಬೇಕಾಗುತ್ತದೆ ಹಾಗೂ ಅಲ್ಪಾಯುಷಿಗಳಾಗುತ್ತೇವೆ ಎಂಬುದು ವಾಸ್ತವದ ಸಂಗತಿ. ಸಧ್ಯದ ಪರಿಸ್ಥಿತಿಯಲ್ಲಿ ಪರಿಸರ ಮಾಲಿನ್ಯವು ಉತ್ತುಂಗದ ಹಂತವನ್ನು ತಲುಪಿದೆ. ಕುಡಿಯಲು ಸಿಹಿನೀರು ಇಲ್ಲ. ನೀರಿನಲ್ಲಿ ಕರಗಿದ ಒಟ್ಟು ಘನ ವಸ್ತುಗಳ (Total dissolved solids) ಪ್ರಮಾಣ ಅಸಮತೋಲನವಾಗಿದೆ. ಹೀಗಾಗಿ ನಾವು ಅಶುದ್ಧವಾದ ನೀರನ್ನು ಕುಡಿಯುತ್ತಿದ್ದೇವೆ. ಇದೆ ರೀತಿ ಕೃಷಿ ಮಣ್ಣು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ ಹಾಗೂ ಬೆಳೆಯುವ ಎಲ್ಲ ಬೆಳೆಗೂ ರಾಸಾಯನಿಕಯುಕ್ತ ಕ್ರಿಮಿನಾಶಕಗಳನ್ನು ಚಿಂಪಡಿಸಲಾಗುತ್ತಿದೆ. ಹೀಗಾಗಿ ತಿನ್ನುವ ಆಹಾರವು ಆರೋಗ್ಯಕರವಾಗಿಲ್ಲ. ಇನ್ನು ಓಝೋನ್ ಪದರದಲ್ಲಿ ರಂದ್ರಗಳಾಗಿರುವುದರಿಂದ ಸೂರ್ಯನ ಬೆಳಕಿನಲ್ಲಿ ವಿಕಿರಣಗಳು ತುಂಬಿಕೊಂಡಿವೆ. ಇನ್ನು ವಾಯು…

Read More

ಸೂರ್ಯನು ಕ್ಷಿತಿಜದಿಂದ ಉದಯವಾಗುವ ಸಮಯದಲ್ಲಿ ಸೂರ್ಯನ ಮೊಟ್ಟ ಮೊದಲ ಕಿರಣಗಳು ಭೂಮಿಯ ತುಂಬ ಪಸರಿಸುವಾಗ ಸೂರ್ಯನ ಕಿರಣಗಳಲ್ಲಿ ಡಿ ವಿಟಮಿನ್ ಇರುತ್ತದೆ ಹಾಗೂ ಇಂತಹ ಎಳೆಬಿಸಿಲಿಗೆ ಅನೇಕ ರೋಗಗಳನ್ನು ಗುಣಪಡಿಸುವ ಪ್ರಚಂಡ ಸಾಮರ್ಥ್ಯ ಇದೆ ಎಂಬುದು ವೈಜ್ಞಾನಿಕಾಗಿ ಸಾಬೀತಾಗಿದೆ. ಸೂರ್ಯನ ಎಳೆ ಬಿಸಿಲಿಗೆ ಮೈಯೊಡ್ಡಿ ಸ್ವಲ್ಪ ಹೊತ್ತಿನ ತನಕ ಕುಳಿತುಕೊಂಡರೆ ಎಂಥಹ ರೋಗಗ್ರಸ್ತ ಮನುಷ್ಯನಿಗೂ ಏನೋ ಒಂದು ಮನೋದೈಹಿಕ ಚೈತನ್ಯ ಪ್ರವಹಿಸಿದ ಅನುಭವ ಉಂಟಾಗುತ್ತದೆ. ಬೆಳ್ಳಂಬೆಳಿಗ್ಗೆ ಮೈತುಂಬ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಅರ್ಧ ಗಂಟಯವರೆಗೆ ಎಳೆ ಬಿಸಿಲಿಗೆ ಮೈಯೊಡ್ಡಿದ ನಂತರ ಸ್ನಾನ ಮಾಡಿದರೆ ಮಾನಸಿಕ ಒತ್ತಡ, ಖಿನ್ನತೆ, ಕ್ರೋಧ, ನಿರುತ್ಸಾಹ, ಕಾಲ್ಪನಿಕ ಭಯ, ಮುಂತಾದ ಮನೋರೋಗಗಳು ನಿಯಂತ್ರಣಕ್ಕೆ ಬಂದುಬಿಡುತ್ತವೆ. ಸೂರ್ಯ ಕಿರಣಗಳ ಸಹಾಯದಿಂದ ಭೂಮಿಯ ಮೇಲಿನ ಪ್ರತಿಯೊಂದು ಸಸ್ಯ ಸಮೂಹ ತಮಗೆ ಬೇಕಾದ ಆಹಾರವನ್ನು ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ತಯಾರು ಮಾಡಿಕೊಳ್ಳುತ್ತವೆ ಅಂದ್ರೆ ಸೂರ್ಯನ ಬೆಳಕಿನಲ್ಲಿ ನಿಗೂಢವಾದ ಒಂದು ಶಕ್ತಿ ಇದೆ ಎಂಬುದನ್ನು ನಾಸ್ತಿಕರೂ ಅಷ್ಟೇ ಅಲ್ಲ ಎಡಪಂಥೀಯ ಚಿಂತಕರು ಕೂಡ…

Read More

ಮೂಲತಃ ವಶೀಕರಣ ಅನ್ನುವುದು ಸಂಸ್ಕೃತ ಭಾಷೆಯಿಂದ ಬಂದ ಶಬ್ದ. ವಶಿ ಅಂದ್ರೆ ಮತ್ತೊಬ್ಬರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಎಂದಾಗುತ್ತದೆ ಹಾಗೂ ಕರಣ ಅಂದ್ರೆ ಮತ್ತೊಬ್ಬರು ನಮ್ಮ ನಿಯಂತ್ರಣದಲ್ಲಿ ಇರುವ ಹಾಗೆ ಮಾಡುವ ಪದ್ಧತಿ ಎಂದಾಗುತ್ತದೆ. ಆದ್ದರಿಂದ ವಶೀಕರಣ ಎಂಬ ಶಬ್ದವು ವಶಿ + ಕರಣ ಎಂಬ ಎರಡು ಶಬ್ದಗಳ ಸಂಯೋಗದಿಂದ ಆಗಿದೆ. ಮತ್ತೊಬ್ಬರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ವಿದ್ಯೆ ಅಂದ್ರೆ ಯಾರಿಗೆ ತಾನೆ ಆಸಕ್ತಿ ಇರುವುದಿಲ್ಲ? ಇದಕ್ಕಾಗಿ ಏನನ್ನಾದರೂ ಮಾಡುತ್ತಾರೆ ಹಾಗೂ ಪ್ರೀತಿ ಮಾಡಿದ ಹುಡುಗಿಯ ಮೇಲೆ ವಶೀಕರಣ ಮಾಡಿಸಿ ನಿಯಂತ್ರಣ ಸಾಧಿಸುವ ಸಲುವಾಗಿ ಎಷ್ಟು ದುಡ್ಡು ಬೇಕಾದರೂ ಖರ್ಚು ಮಾಡಲು ಸಿದ್ಧರಿರುತ್ತಾರೆ. ಜಗತ್ತಿನ ಪ್ರಬಲ ರಾಷ್ಟ್ರಗಳು ಅತ್ಯಂತ ರಹಸ್ಯ ಯೋಜನೆ ಒಂದನ್ನು ರುಪಿಸಿಕೊಂಡು ಕೋಟಿ ಗಟ್ಟಲೆ ದುಡ್ಡು ಸುರಿದು ಮತ್ತೊಬ್ಬರ ಮೇಲೆ ನಿಯಂತ್ರಣ ಸಾಧಿಸುವ ರಹಸ್ಯ ಸಂಶೋಧನೆಗಳಲ್ಲಿ ತೊಡಗಿದ್ದಾರೆ. ಇಂತಹ ಸಂಶೋಧನೆಗಳ ಪ್ರಮುಖ ಭಾಗವೇ ಸೈಕಾಲಜಿಕಲ್ ವೆಪನ್ ಸಿಸ್ಟಮ್ ಡೆವಲಪ್ಮೆಂಟ್! ಸೈಕಾಲಜಿಕಲ್ ವೆಪನಗಳಿಂದ ಎದುರಾಳಿಯ ಅಭಿಪ್ರಾಯವನ್ನು, ಮನೋಭಾವವನ್ನು, ಆಲೋಚನೆಯನ್ನು, ನಡವಳಿಕೆಯನ್ನು, ಭಾವನೆಯನ್ನು ಪ್ರಭಾವಗೊಳಿಸಲು…

Read More

ಸೌಂಡ್ ಹೀಲಿಂಗ್ ಹಾಗೂ ರೋಗಗಳು ಸೌಂಡ್ ಹೀಲಿಂಗ್ ಹಾಗೂ ರೋಗಗಳು  ನಮಗೆಲ್ಲರಿಗೂ ತಿಳಿದಿರುವಂತೆ ಶಬ್ದವು ಶಕ್ತಿಯ ಒಂದು ರೂಪ. ವಿಶಿಷ್ಟವಾದ ಕಂಪನವುಳ್ಳ ಶಬ್ದದಿಂದ ಅನಂತವಾದ ಲಾಭಗಳಿವೆ ಎಂಬುದು ನಮಗೆ ಪ್ರಾಚೀನ ಈಜಿಪ್ಟಿಯನ್ ಮತ್ತು ಗ್ರೀಕ್ ನಾಗರಿಕತೆಯ ಇತಿಹಾಸದಿಂದ ತಿಳಿದುಬರುತ್ತದೆ. ಶಬ್ದವು ನೆನಪಿನ ಶಕ್ತಿಯನ್ನು ಹಾಗೂ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ವಿಶಿಷ್ಟವಾದ ಕಂಪಣವುಳ್ಳ ಶಬ್ದವು ಚಿಕಿತ್ಸಕಾರಿ ಗುಣಗವನ್ನು ಹೊಂದಿದೆ ಎಂಬುದನ್ನು ಪ್ರಾಚೀನ ಈಜಿಪ್ಟಿಯನ್ ಮತ್ತು ಗ್ರೀಕ್ ನಾಗರಿಕತೆಗಳು ಅರ್ಥಮಾಡಿಕೊಡಿದ್ದವು. ವಿಶಿಷ್ಟವಾದ ಶಬ್ದ ಕಂಪನದ ಮೂಲಕ ರೋಗಗಳನ್ನು ಗುಣಪಡಿಸುವ ವಿಧಾನಕ್ಕೆ ಸೌಂಡ್ ಹೀಲಿಂಗ್ ಎನ್ನಲಾಗುತ್ತದೆ. ಸೌಂಡ್ ಹೀಲಿಂಗ್ ಎಂಬುದು ಪ್ರಾಚೀನ ರೋಗ ಚಿಕಿತ್ಸಾ ವಿಧಾನಗಳಲ್ಲಿ ಒಂದು ಹಾಗೂ ಇದನ್ನು ಜಗತ್ತಿನಾದ್ಯಂತ ಬೇರೆ ಬೇರೆ ಸಂಸ್ಕೃತಿಯ ಜನರು ರೋಗಗಳನ್ನು ಗುಣಪಡಿಸಲು ರೋಗಿಗಳ ಮೇಲೆ ಅನುಷ್ಠಾನಗೊಳಿಸುತ್ತಿದ್ದರು. ಸುಮಾರು 40 ಸಾವಿರ ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿದ್ದ ಮೂಲನಿವಾಸಿಗಳು ಮುರಿದ ಮೂಳೆಯನ್ನು ಜೋಡಿಸಲು ಹಾಗೂ ಇತರೆ ರೋಗಗಳನ್ನು ಗುಣಪಡಿಸಲು ಮೊಟ್ಟ ಮೊದಲ ಬಾರಿಗೆ ಶಬ್ದದ ಕಂಪನಗಳನ್ನು ಬಳೆಸುತ್ತಿದ್ದರು ಎಂದು ಹೇಳಲಾಗುತ್ತದೆ. ಆಸ್ಟ್ರೇಲಿಯಾದ…

Read More

ವೈಜ್ಞಾನಿಕ ವಾಸ್ತು ಮನೆಬಾಗಿಲಿನ ದಿಕ್ಕುಗಳು ವಾಸ್ತು ಶಾಸ್ತ್ರದ ಪ್ರಕಾರ ನಾವು ವಾಸಿಸುವ ಮನೆಯ ಮೇಲೆ ಗ್ರಹ ನಕ್ಷತ್ರಗಳ ಪ್ರಭಾವ ನಿರಂತರವಾಗಿ ಆಗುತ್ತಿರುತ್ತದೆ. ಪ್ರತಿಯೊಂದು ಗ್ರಹಗಳು ಎಸ್ಟೇ ದೂರದಲ್ಲಿ ಇದ್ದರೂ ಅವು ಮಾನವನ ಜೀವನದ ಮೇಲೆ ಏಕ ಕಾಲದಲ್ಲಿ ಒಳ್ಳೆಯ ಮತ್ತು ಕೆಟ್ಟ ಪ್ರಭಾವಗಳನ್ನು ಮಾಡುತ್ತಿರುತ್ತವೆ. ಗ್ರಹಗಳ ಪ್ರಭಾವವು ನಿರ್ಜೀವ ಮತ್ತು ಸಜೀವ ವಸ್ತುಗಳ ಎರಡರ ಮೇಲೂ ಆಗುತ್ತಿರುತ್ತದೆ. ಇದಕ್ಕೆ ಉದಾಹರಣೆ ಎನ್ನುವಂತೆ ಚಂದ್ರನ ಗುರುತ್ವಾಕರ್ಷಣ ಶಕ್ತಿಯಿಂದ ಉಂಟಾದ ಆಕರ್ಷಣೆ ಮತ್ತು ವಿಕರ್ಷಣೆಯಿಂದಾಗಿ ಸಮುದ್ರದಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನ ಹೇಗೆ ಉಬ್ಬರವಿಳಿತಗಳಾಗುತ್ತವೆಯೋ ಇದೇ ರೀತಿ ಮನುಷ್ಯನ ರಕ್ತೆದಲ್ಲೂ ಕೂಡ ಚಂದ್ರನ ಗುರುತ್ವಾಕರ್ಷಣ ಶಕ್ತಿಯಿಂದ ಅತಿ ಸೂಕ್ಷ್ಮ ಉಬ್ಬರವಿಳಿತಗಳಾಗುತ್ತವೆ ಏಕೆಂದ್ರೆ ಸಮುದ್ರದ ನೀರಿನ ಮತ್ತು ಮಾನವನ ರಕ್ತದ ಸಂಯೋಜನೆಗಳು ಒಂದೇ ಆಗಿರುತ್ತವೆ. ಸಮುದ್ರದ ನೀರಿನಲ್ಲಿ 80% ಸೋಡಿಯಂ ಇದೆ. ಕ್ಯಾಲ್ಸಿಯಂ 4% ಇದೆ. ಪೊಟ್ಯಾಸಿಯಂ 4% ಇದೆ ಹಾಗೂ 12% ದಷ್ಟು ಮಗ್ನೆಸಿಯಂ ಮತ್ತು ಇತರೆ ಲವಣಗಳು ಇವೆ. ಇದೇ ರೀತಿಯ ಸಂಯೋಜನೆಯು…

Read More

ಮಾನಸಿಕ ಒತ್ತಡ ಮತ್ತು ಆರೋಗ್ಯ –  ದೈಹಿಕ ಆರೋಗ್ಯ ಬೇಕು ಅಂದ್ರೆ ಮೊದಲು ಮನಸ್ಸಲ್ಲಿ ಉದ್ಭವವಾಗುವ ಆಲೋಚನೆಗಳು ನಿಲ್ಲಬೇಕು. ನೀರಿನ ಆಳಕ್ಕೆ ಅಸಂಖ್ಯಾತ ಚಿಕ್ಕ ಚಿಕ್ಕ ನೀರಿನ ಗುಳ್ಳೆಗಳು ಉದ್ಬವವಾಗಿ ಆಕಾರದಲ್ಲಿ ದೊಡ್ಡ ಗಾತ್ರವನ್ನು ಹೊಂದುತ್ತಾ ಹೊಂದುತ್ತಾ ನಿಧಾನವಾಗಿ ನೀರಿನ ಮೇಲ್ಬಾಗಕ್ಕೆ ಬಂದು ಹೇಗೆ ನೀರಿನ ಗುಳ್ಳೆಗಳು ಒಡೆದು ಬಿಡುತ್ತವೋ ಅದೇ ರೀತಿ ಇವತ್ತಿನ ಒತ್ತಡದ ಜೀವನದಿಂದ ಮನಸ್ಸಿನ ಆಳಭಾಗದಲ್ಲಿ ಅನಂತವಾದ ಆಲೋಚನೆಗಳು ಉದ್ಭವಿಸಿ( Thinking developes at the bottom of consciousness which the modern psychology calls it as subconscious mind) ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಾ ನಿಧಾನವಾಗಿ ಮನಸ್ಸಿನ ಮೇಲ್ಬಾಗಕ್ಕೆ (conscious mind) ಬಂದು ಅಪ್ಪಳಿಸಿ ಎಲ್ಲ ಆಲೋಚನೆಗಳು ಒಮ್ಮಿಂದೊಮ್ಮಿಲೇ ಸ್ಪೋಟಗೊಳ್ಳುತ್ತಿದ್ದಂತೆ ಎರಡು ಕೈಗಳನ್ನು ತಲೆ ಮೇಲೆ ಇಟ್ಟು oh my god I can’t control my mind ಅಂತ ಅಂದುಬಿಟ್ಟಿರುತ್ತೇವೆ. ಇಂತಹ ಅನುಭವ ಪ್ರತಿನಿತ್ಯ ಹೆಚ್ಚಿನ ಜನರಿಗೆ ಆಗುತ್ತಿರುತ್ತದೆ. ನಾವು ಮನಸ್ಸನ್ನು ಬಾಹ್ಯಾಜಗತ್ತಿನತ್ತ ಹರಿಸಿದಷ್ಟು…

Read More

ಬಾನಾಮತಿ ಎಂಬ ಕ್ಷುದ್ರ ಶಕ್ತಿ ಪ್ರಯೋಗ ನಡೆದಿದೆ ಎಂದಾಕ್ಷಣ ವಿಪರೀತ ಕುತೂಹಲ ಪ್ರತಿಯೊಬ್ಬರಲ್ಲೂ ಹುಟ್ಟಿಬಿಡುತ್ತದೆ. ದೊಡ್ಡ ದೊಡ್ಡ ವಿಜ್ಞಾನಿಗಳಿಂದ ಹಿಡಿದು ಆಸ್ತಿಕರು, ನಾಸ್ತಿಕರು, ಹಾಗೂ ಪವಾಡ ಬಯಲು ಮಾಡುವವರ ವರೆಗೆ ಎಲ್ಲರೂ ಬಾನಾಮತಿ ಕ್ಷುದ್ರ ಶಕ್ತಿ ಪ್ರಯೋಗ ನಡೆದ ಸ್ಥಳಕ್ಕೆ ದೌಡಾಯಿಸಿಬಿಡುತ್ತಾರೆ. ಇವರೆಲ್ಲರೂ ತಮ್ಮ ತಮ್ಮ ಸಿದ್ಧಾಂತಗಳಿಗೆ ಅನುಗುಣವಾಗಿ ಬಾನಾಮತಿ ಕ್ಷುದ್ರ ಶಕ್ತಿಯನ್ನು ಭೇದಿಸುವ ಮಹಾ ಕಾರ್ಯದಲ್ಲಿ ತೊಡಗುತ್ತಾರೆ. ಬಾನಾಮತಿ ಶಕ್ತಿ ಪ್ರಯೋಗದ ಸಾಮರ್ಥ್ಯ ಎಂತದ್ದು? ಬಾನಾಮತಿ ಶಕ್ತಿ ಪ್ರಯೋಗವನ್ನು ಮಾಡಲು ನಿಜವಾಗಲೂ ಸಾಧ್ಯವಾಗುತ್ತದಾ? ಬಾನಾಮತಿ ಶಕ್ತಿಯಿಂದ ಏನೆಲ್ಲಾ ಅನಾಹುತಗಳಾಗುತ್ತವೆ? ಬಾನಾಮತಿಯ ಕುರಿತಾದ ಇಂತಹ ಅನೇಕ ಅಂಶಗಳು ಮೇಲೆ ರೋಮಾಂಚನಕಾರಿಯಾದ ಕಥೆಗಳು ಹುಟ್ಟಿಕೊಂಡಿವೆ ಹಾಗೂ ನಮ್ಮ ಪೂರ್ವಜರಿಂದ ಬಾನಾಮತಿಯ ಕುರಿತಾದ ಅನೇಕ ವಿಚಾರಗಳು ಬಾಯಿಂದ ಬಾಯಿಗೆ ಹರಿಯುತ್ತಾ ಕಿರಿಯರನ್ನು ತಲುಪಿವೆ. 13/4/1980 ರಂದು ಕನ್ನಡ ಪ್ರಭ ಪತ್ರಿಕೆಯ ಭಾನಾಮತಿಯ ಕುರಿತು ಪ್ರಕಟ ಮಾಡಿದರೆ ಪ್ರಜಾವಾಣಿ ಪತ್ರಿಕೆಯು 11/01/1981ರಂದು ಬಾನಾಮತಿ ಕುರಿತು ಅರ್ಥಗರ್ಭಿತವಾದ ವಿಚಾರಗಳನ್ನು ಪ್ರಕಟ ಮಾಡಿ ನಾಗರಿಕರಲ್ಲಿ ಮಾಟ ಮಂತ್ರದ ಕುರಿತು…

Read More

ಮನೆಯೊಳಗೆ ಸ್ವಸ್ತಿಕ ಓಂ ಅಂಟಿಸಿ ಧನಾತ್ಮಕ ಶಕ್ತಿಯನ್ನು ಪಡೆದುಕೊಳ್ಳಿ. ಈ ಪ್ರಪಂಚದಲ್ಲಿ ಪ್ರತಿಯೊಂದು ಧರ್ಮದ ಜನರು ತಮ್ಮ ತಮ್ಮ ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ಪ್ರಾಚೀನಕಾಲದಿಂದಲೂ ತಮ್ಮದೇ ಆದ ಕೆಲವು ಧನಾತ್ಮಕ ಚಿಹ್ನೆಗಳನ್ನು ಹೊಂದಿದ್ದಾರೆ. ಹಿಂದೂಗಳು ಸ್ವಸ್ತಿಕ ಅನ್ನು (卐) ಮತ್ತು “ಓಂ” (ॐ)ಅನ್ನು ಧನಾತ್ಮಕ ಶಕ್ತಿ ಚಿಹ್ನೆಯನ್ನಾಗಿ ಬಳೆಸುತ್ತಾರೆ. ಆದರೆ ಅಂಗಡಿಗಳಲ್ಲಿ, ಮನೆಗಳಲ್ಲಿ, ದೇವಸ್ಥಾನಗಳಲ್ಲಿ, ಮದುವೆ ಮಂಟಪಗಳಲ್ಲಿ ಮುಂತಾದ ಕಡೆ (ॐ) ಮತ್ತು ಸ್ವಸ್ತಿಕ (卐) ಚಿಹ್ನೆಯನ್ನು ಪ್ರದರ್ಶಿಸುವ ಸಂಪ್ರದಾಯ ಇತ್ತೀಚೆಗೆ ಹಿಂದೂಗಳಲ್ಲಿ ಕ್ಷೀಣಿಸುತ್ತಿದೆ. ಬೌದ್ಧ ಹಾಗೂ ಜೈನ ಧರ್ಮದಲ್ಲೂ ಸ್ವಸ್ತಿಕ (卐) ಚಿಹ್ನೆಯನ್ನು ಪವಿತ್ರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಡಾಲ್ಫ್ ಹಿಟ್ಲರ್ ಕೂಡ ಸ್ವಸ್ತಿಕ (卐) ಚಿಹ್ನೆಯನು ತನ್ನ ನಾಜಿ ಪಕ್ಷದ ಲೋಗೋ ಅನ್ನಾಗಿ ಮಾಡಿಕೊಂಡಿದ್ದ. ಇದೇ ರೀತಿ ಕ್ರಿಶ್ಚಿಯನ್ ಧರ್ಮದಲ್ಲಿ ಶಿಲುಬೆಯ ✟ ಪವಿತ್ರವಾದ ಚಿಹ್ನೆಯೆಂದು ಪರಿಗಣಿಸಲಾಗುತ್ತದೆ. ಮುಸಲ್ಮಾನರು ತಮ್ಮ ಇಸ್ಲಾಂ ಧರ್ಮದ ನಂಬಿಕೆಗೆ ಅನುಗುಣವಾಗಿ ನಕ್ಷತ್ರವನ್ನು ಹೊಂದಿದ ಅರ್ಧಚಂದ್ರಾಕೃತಿಯನ್ನು ಧನಾತ್ಮಕ ಚಿಹ್ನೆ ಎಂದು ಭಾವಿಸುತ್ತಾರೆ. ಹಾಗೂ ರಷ್ಯನ್ನರು ಕೀಲಿಕೈ…

Read More