Author: Anveshana

ವಿಜ್ಞಾನದಿಂದ ದೀರ್ಘಾಯುಷಿಗಳಾಗಬಹುದು ಆದರೆ ಅಮರತ್ವವಿಲ್ಲ! ಭೌತಜಗತ್ತಿನಲ್ಲಿ ಜೀವಿಗಳು ಸೃಷ್ಟಿಯಾದ ಮೇಲೆ ಪ್ರತಿ ಜೀವಿಯು ಜೀವನವನ್ನು ಸಾಗಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದವೆ. ಆದರೆ ಮೃತ್ಯುವಿನ ಪಾಶದಿಂದ ಬಿಡಿಸಿಕೊಂಡು ಅಮರತ್ವವನ್ನು ಸಾಧಿಸಲಾರದಷ್ಟು ಪ್ರಕೃತಿಯ ನಿಯಮಗಳು ಬಲಿಷ್ಠವಾಗಿವೆ. ಪ್ರಕೃತಿಯ ನಿಯಮಕ್ಕೆ ಅನುಗುಣವಾಗಿ ಪ್ರತಿಯೊಬ್ಬರೂ ಮೃತ್ಯುವಿನ ಪಾಶಕ್ಕೆ ಒಳಗಾಗಬೇಕಾಗುತ್ತದೆ. ಈ ಭೌತಾಜಗತ್ತಿನಲ್ಲಿ ಯಾರೊಬ್ಬರೂ ಸಾಯಲು, ವೃದ್ದರಾಗಲು ಹಾಗೂ ಕಾಯಿಲೆಯಿಂದ ಬಳಲಲು ಇಷ್ಟಪಡುವುದಿಲ್ಲ. ಆದರೆ ಪ್ರಕೃತಿಯ ನಿಯಮಗಳಿಗೆ ಅನುಗುಣವಾಗಿ ಪ್ರತಿ ಜೀವಿಯೂ ಕಾಯಿಲೆ, ಮುಪ್ಪು ಹಾಗೂ ಸಾವನ್ನು ಎದುರಿಸಬೇಕಾಗುತ್ತದೆ. ಮನುಕುಲದ ಇತಿಹಾಸದಲ್ಲಿ ಕಾಯಿಲೆ, ಮುಪ್ಪು ಹಾಗೂ ಸಾವನ್ನು ಬರೆದಂತೆ ಮಾಡಿ ಅಮರತ್ವವನ್ನು ಸಾಧಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಅಂತಹ ಯಾವ ಪ್ರಯತ್ನಗಳು ಇಲ್ಲಿಯವರೆಗೆ ಯಶಸ್ಸು ಹೊಂದಲಿಲ್ಲ. ಹಾಗೂ ಭವಿಷ್ಯದಲ್ಲಿ ಅಮರತ್ವವನ್ನು ಯಾರೊಬ್ಬರೂ ಸಾಧಿಸಲಾರರು. ಏಕೆಂದರೆ ಯಾರೊಬ್ಬರೂ ಪ್ರಕೃತಿ ನಿಯಮಗಳನ್ನು ಮೀರಲು ಸಾಧ್ಯವಿಲ್ಲ. ಲೌಕಿಕವಾಗಿ ಮುಂದುವರೆದ ಹಿರಣ್ಯಕಶಿಪುವಿನ ಶಕ್ತಿ ಸಾಮರ್ಥ್ಯಗಳ ಕುರಿತು ಹಾಗೂ ಆತನ ಕಾರ್ಯಚಟುವಟಿಕೆಗಳ ಬಗ್ಗೆ ನಾವು ಪುರಾಣಗಳಲ್ಲಿ ಕೇಳಿದ್ದೇವೆ ಹಾಗೂ ಪುಣ್ಯ ಕಥೆಗಳಲ್ಲಿ ಓದಿದ್ದೇವೆ. ಆತ ಐಹಿಕ…

Read More

ಭೃಗು, ಅತ್ರಿ ವಸಿಷ್ಠ, ನಾರದ, ಮಯ ವಿಶ್ವಕರ್ಮ ಮುಂತಾದ ಋಷಗಳು ವಾಸ್ತುಶಾಸ್ತ್ರವನ್ನು ಮನುಕುಲಕ್ಕೆ ಕಾಣಿಕೆಯನ್ನಾಗಿ ಕೊಟ್ಟರು. ಜಪಾನ್, ಅಮೇರಿಕಾ, ಜರ್ಮನ್, ಚೀನಾ ಮುಂತಾದ ಕೆಲವು ರಾಷ್ಟ್ರಗಳು, ಪ್ರಾಚೀನ ಕಾಲದ ಅತ್ಯಮೂಲ್ಯವಾದ ಈ ವಾಸ್ತು ವಿಜ್ಞಾನದ ಪೂರ್ಣಪ್ರಮಾಣದ ಲಾಭವನ್ನು ಪಡೆಯುತ್ತಿವೆ. ದುರದೃಷ್ಟವಶಾತ್ ನಮ್ಮ ಪ್ರಾಚೀನ ವಾಸ್ತು ವಿಜ್ಞಾನದ ಕುರಿತು ನಾವು ಮೂಢನಂಬಿಕೆ ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಅದರ ಲಾಭ ಪಡೆಯುವಲ್ಲಿ ವಿಫಲತೆ ಹೊಂದಿದರೆ ಆಕಡೆ ತೀವ್ರಗತಿಯಿಂದ ಅಭಿವೃದ್ಧಿ ಹೊಂದುತ್ತಿರುವ ಲಂಡನ್, ಹಾಂಕಾಂಗ್, ಟೋಕಿಯೋ, ನೆವಾರ್ಕ್  ಪಟ್ಟಣಗಳು ವಾಸ್ತು ಶಾಸ್ತ್ರದ ನಿಯಮಗಳನ್ನು ಚಾಚುತಪ್ಪದೇ ಕಟ್ಟುನಿಟ್ಟಾಗಿ ಅನುಸರಿಸುತ್ತಿವೆ. ಆದರೆ ವಾಸ್ತವವಾಗಿ ನಾವು ವಾಸ್ತು ಶಾಸ್ತ್ರವನ್ನು ಅಲ್ಪ ಸ್ವಲ್ಪ ಅನುಸರಿಸುತ್ತಿರುವುದರಿಂದ ಗರಿಷ್ಠ ಪ್ರಮಾನದ ಫಲವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಕುತೂಹಲಕಾರಿ ಹಾಗೂ ರಹಸ್ಯವಾದ ವಾಸ್ತು ವಿದ್ಯೆಯನ್ನು ತತ್ಸಾರ ಮಾಡುತ್ತಿರುವುದು ಒಂದು ದೊಡ್ಡ ದುರಾದೃಷ್ಟಕರ ಸಂಗತಿ. ತಮ್ಮನ್ನೇ ತಾವು ದೊಡ್ಡ ಜ್ಞಾನಿಗಳೆಂದು ಪರಿಗಣಿಸಿಕೊಂಡು ಕಲ್ಪನಾಲೋಕದಲ್ಲಿ ತೇಲಿ ಮುಳುಗುವ ನಾಸ್ತಿಕರು ಯಾವುದೇ ಪ್ರಾಯೋಗಿಕ ಪರೀಕ್ಷೆ ಮಾಡದೆ ವಾಸ್ತು ಶಾಸ್ತ್ರವನ್ನು ಮೂಢನಂಬಿಕೆಯೆಂದು ಭಾವಿಸಿಬಿಡುತ್ತಾರೆ.…

Read More

ಏಲಿಯನ್ಸ್ ಹುಡುಕಾಟ 14 ಲೋಕಗಳು ಹಾಗೂ ಬ್ರಹ್ಮಾಂಡ  – ಇವತ್ತಿನ ಆಧುನಿಕ ವಿಜ್ಞಾನಿಗಳು ಸ್ಪೇಸ್ ವೇಹಿಕಲ್ಲಗಳನ್ನು ಅನ್ಯಗ್ರಹ ಜೀವಿಗಳ ಅನ್ವೇಷಣೆಗೆಂದು ಕಳಿಸುತ್ತಿದ್ದಾರೆ ಹಾಗೂ ಸಾವಿರಾರು ಕೋಟಿ ಹಣ ಖರ್ಚು ಮಾಡಿ 2070ರ ಹೊತ್ತಿಗೆ ಪಕ್ಕದ ಗ್ರಹ ಮಂಗಳಕ್ಕೆ ಹೋಗಿ ಮಾನವ ನೆಲೆಗಳನ್ನು ಸ್ಥಾಪಿಸಿ ಜೀವಿಗಳು ಬಾಳಿ ಬದುಕುವ ಪರಿಸರವನ್ನು ಸೃಷ್ಟಿ ಮಾಡುವ ಯೋಜನೆಯಲ್ಲೂ ಇದ್ದಾರೆ. ಆದರೆ ನಮ್ಮ ಪ್ರಾಚೀನ ಋಷಿಗಳು ಧ್ಯಾನದಲ್ಲಿ ಕುಳಿತುಕೊಂಡು ತಮ್ಮ ಮನಸ್ಸನ್ನು ಬ್ರಹ್ಮಾಂಡದ ಯಾವುದೇ ಗ್ರಹ ನಕ್ಷತ್ರಗಳಿಗೆ ಕಳುಹಿಸಿ ದೇವರು ಸೃಷ್ಟಿಸಿದ ಬ್ರಹ್ಮಾಂಡದ ಅದ್ಭುತಗಳನ್ನು ನೋಡಿದ್ದರು. 4.2 ಜ್ಯೋತಿರ್ವರ್ಷ ದೂರದ ಪ್ರಾಕ್ಸಿಮಾ ಸೆಂಟಾರಿ ಸೌರವ್ಯೂಹದಲ್ಲಿರುವ ಪ್ರಾಕ್ಸಿಮಾ ಸೆಂಟಾರಿ ನಕ್ಷತ್ರವು ನಮ್ಮ ಹತ್ತಿರದ ನಕ್ಷತ್ರ ಎಂದು ವಿಜ್ಞಾನಿಗಳು ದೃಢಪಡಿಸಿರುವುದನ್ನು ನಾವು ಹತ್ತನೆಯ ತರಗತಿಯಲ್ಲಿ ಓದಿದ್ದೇವೆ. ಆದರೆ ನಮ್ಮ ಪ್ರಾಚೀನ ಋಷಿಗಳು ಈ ಪ್ರಾಕ್ಸಿಮಾ ಸೆಂಟಾರಿ ನಕ್ಷತ್ರಕ್ಕೆ ಮಿತ್ರ ಎಂದು ಹೆಸರಿಟ್ಟಿದ್ದರು. ಸಂಸ್ಕೃತ ಭಾಷೆಯಲ್ಲಿ ಮಿತ್ರ ಅಂದರೆ ಹತ್ತಿರದ ಗೆಳೆಯ ಎಂದಾಗುತ್ತದೆ. 1969ರಲ್ಲಿ ಅಪೋಲೋ 11ರಲ್ಲಿ ಪ್ರಯಾಣ ಮಾಡಿದ ನೀಲ್…

Read More

ಅನಾಮಿಕನೊಬ್ಬ ಭೂಮಿ ನಡುಗುವ ರೀತಿ ದೊಡ್ಡ ದ್ವನಿಯಲ್ಲಿ “ಶಂಭೋ ಶಂಕರ” ಎನ್ನುತ್ತಾ ದೊಡ್ಡ ಶಂಖ ಒಂದನ್ನು ಉದುತ್ತಿದ್ದರೆ ಆ ಅನಾಮಿಕನು ಸಾಧಾರಣ ವ್ಯಕ್ತಿ ಆಗಿರುವ ಸಾಧ್ಯತೆ ತುಂಬಾ ವಿರಳ. ಈ ರೀತಿ “ಶಂಭೋ ಶಂಕರ” ಅಂತ ಭೂಮಿ ನಡುಗುವ ಹಾಗೆ ಘೋಷಣೆ ಮೊಳಗಿಸುವವರು ವಾರಣಾಸಿ, ಉಜ್ಜಯಿನಿ, ಅಸ್ಸಾಮಿನ ಗೌಹಾತಿಯ ಕಾಮಾಕ್ಯ ದೇವಸ್ಥಾನದ ಅಕ್ಕಪಕ್ಕದ ನಿರ್ಜನ ಪ್ರದೇಶದಲ್ಲಿ, ತ್ರಯಂಬಕೇಶ್ವರ, ಹಿಮಾಲಯದ ತಪ್ಪಲಿನಲ್ಲಿ, ಹಾಗೂ ಭಾರತ-ಚೀನಾ- ಟಿಬೆಟ್ ಗಡಿಭಾಗದಲ್ಲಿ ಕಾಣಸಿಗುತ್ತಾರೆ. ಇವರು ಗಾಳಿಯಲ್ಲಿ ಸಂಚರಿಸಬಲ್ಲರು, ನೀರಿನಲ್ಲಿ ತೇಲಬಲ್ಲರು, ವರ್ಣವಿದ್ಯೆಯನ್ನು ಪ್ರಯೋಗಿಸಿ ಕತ್ತಲೆಯಲ್ಲಿ ಪ್ರಚಂಡವಾದ ಬೆಳಕನ್ನು ಸೃಷ್ಟಿಸಿ ಆ ಬೆಳಕಿಗೆ ತಮಗಿಷ್ಟವಾದ ಬಣ್ಣಗಳನ್ನು ತುಂಬಬಲ್ಲರು, ಅಷ್ಟೇ ಏಕೆ ಮನೋಶಕ್ತಿಯಿಂದ ಮತ್ತೊಬ್ಬರನ್ನು ಕ್ಷಣಾರ್ಧದಲ್ಲಿ ವಶಿಕರಣ ಮಾಡಬಲ್ಲರು ಏಕೆಂದರೆ ಇವರು ಆಘೋರಿಗಳು! ಇವರ ಪಂಚೇಂದ್ರಿಯಗಳು ಬಹುಕಾರ್ಯ(Multifunction) ಮಾಡಬಲ್ಲವು! ಏಕೆಂದ್ರೆ ಇವರು ಅಘೋರಿ ಮಾಂತ್ರಿಕರು. ಜಗತ್ತಿನ ಯಾವುದೇ ಸ್ಥಳದಲ್ಲಿ ನಡೆಯುವ ವಿದ್ಯಮಾನವನ್ನು ಧ್ಯಾನದಲ್ಲಿ ಕುಳಿತು ಗ್ರಹಿಸಬಲ್ಲರು ಅಷ್ಟೇ ಏಕೆ ಅಘೋರ ಮಂತ್ರದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಮನುಷ್ಯನ ಮೇಲೆ ಶಕ್ತಿ…

Read More

ಯೋಗ ಪದವು ಸಂಸ್ಕ್ರುತದ ಯುಜ್ ಎಂಬ ಪದದಿಂದ ಹುಟ್ಟಿದೆ. ಯುಜ್ ಎಂದರೆ ಜೋಡಿಸುವುದು, ಎಳೆಯುವುದು ಹಾಗೂ ಸೇರಿಸುವುದು ಎಂಬ ಅರ್ಥವನ್ನು ಕೊಡುತ್ತದೆ. ಸಾಧಕನು ಯೋಗದಿಂದ ಧ್ಯಾನದಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯ. ಇವತ್ತಿನ ಆಧುನಿಕ ಸಮಾಜದಲ್ಲಿ ಮನುಷ್ಯ ಪ್ರಾಪಂಚಿಕ ಸುಖ ಭೋಗದಲ್ಲಿ ತೇಲಿ ಮುಳುಗುತ್ತಿದ್ದಾನೆ. ಇದರಿಂದಾಗಿ ದ್ವೇಷ, ಹಿಂಸೆ, ದುರ್ಗುಣ, ಕೆಡಕು, ಸುಖ, ಸೂಲುಗೆ, ಕಳ್ಳತನ, ದುಃಖ, ಪ್ರೀತಿ-ಪ್ರೇಮ, ಶಾಶ್ವತ-ಕ್ಷಣಿಕ, ಕಾಮಪ್ರಚೋದಕ ಮನಸ್ಸು, ಕ್ರೋಧ, ಲೋಭ, ಮೋಹ, ಮತ್ಸರ ಮುಂತಾದ ಭಾವನೆಗಳಿಗೆ ಮಾನವ ದಾಸನಾಗಿದ್ದಾನೆ. ಇಂತಹ ಭಾವನೆಗಳಿಗೆ ದಾಸನಾದ ಮಾನವನಿಗೆ ಮಾನಸಿಕ ನೆಮ್ಮದಿ ಹಾಗೂ ಶಾಂತಿ ಇರಲು ಸಾಧ್ಯವೇ? ದುಡ್ಡು ಒಂದು ಇದ್ರೆ ಏನನ್ನಾದರೂ ಪಡೆದುಕೊಳ್ಳಬಹುದೆಂಬ ಕಲ್ಪನೆ ನಮಗೆ ನಾವೇ ಮಾಡಿಕೊಂಡಿರುವುದು ಒಂದು ದೊಡ್ಡ ದುರದೃಷ್ಟಕರ ಸಂಗತಿ. ದುಡ್ಡಿನಿಂದ ನಾವು ಕೇವಲ ಐಹಿಕ ಸೌಕರ್ಯಗಳನ್ನು ಮಾಡಿಕೊಳ್ಳಬಹುದು. ಆದರೆ ಆದರ್ಶವಾದ ಮಾನವ ಸಂಬಂಧಗಳು, ಪರಸ್ಪರ ವಿಶ್ವಾಸ, ಆರೋಗ್ಯ, ನಿದ್ರೆ, ಮಾನಸಿಕ ಶಾಂತಿ ಮುಂತಾದ ಅಂಶಗಳನ್ನು ದುಡ್ಡಿನಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ಆಧುನಿಕ ಮಾನವ ಅನೇಕ ವಿರುದ್ಧ…

Read More

ಆಯುರ್ವೇದವೆಂಬದು ಶಕ್ತಿ ಹಾಗೂ ವಾತ-ಪಿತ್ತ-ಕಫ ಎಂಬ ತ್ಯಾಜ್ಯಗಳು ದೇಹದಲ್ಲಿ ಜೈವಿಕ ರಾಸಾಯನಿಕ ಕ್ರಿಯೆ ನಡೆಯುವಾಗ ಉಂಟಾಗುತ್ತವೆ. ಇವುಗಳ ಆಸಮತೋಲನವಾದರೆ ದೇಹದಲ್ಲಿ ರೋಗಗಳು ಕಾಣಿಸಿಕೊಳ್ಳುತ್ತವೆ. ದೇಹವು ಪಂಚಮಹಾಭೂತಗಳಾದ ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶದಿಂದ ಸಯೋಜನೆ ಆಗಲ್ಪಟ್ಟಿರುತ್ತದೆ ಎಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ. ಈ ಪಂಚಮಹಾಭೂತಗಳು ಜೈವಿಕ ವ್ಯವಸ್ಥೆಯಲ್ಲಿ ಸಂವಹನ ನಡೆಸುವಾಗ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ತ್ರಿದೋಷಗಳೆಂದು ಹೇಳಲಾಗುತ್ತದೆ. ಈ ತ್ರಿದೋಷಗಳನ್ನು ವಾತ, ಪಿತ್ತ ಮತ್ತು ಕಫವೆಂದು ವಿಂಗಡಿಸಲಾಗಿದೆ. ವಿದ್ಯುತ್ ತಂತಿಯಲ್ಲಿ ಹರಿಯುವಾಗ ತಂತಿಯ ಜೊತೆಗೆ ವಿದ್ಯುತ್ ಸಂವಹನಗೊಂಡಾಗ ತಂತಿಯಲ್ಲಿ ವಿದ್ಯುತ್ಕಾಂತೀಯ, ಶಾಖ ಶಕ್ತಿಯ, ಹಾಗೂ ರಾಸಾಯನಿಕ ಪ್ರಭಾವ ಉಂಟಾಗುತ್ತದೆ. ವಿದ್ಯುತ್ಕಾಂತಿಯ ಪ್ರಭಾವದಿಂದ ಫ್ಯಾನ್ ತಿರುಗುತ್ತದೆ. ಶಾಖ ಶಕ್ತಿಯ ಪ್ರಭಾವದಿಂದ ನೀರು ಕಾಯಸಲಾಗುತ್ತದೆ ಹಾಗೂ ಬುಲ್ಬ್ ಉರಿಸಲಾಗುತ್ತದೆ ಮತ್ತು ರಾಸಾಯನಿಕ ಪ್ರಭಾವದಿಂದ ಬ್ಯಾಟರಿ ಚಾರ್ಜ್ ಮಾಡಲಾಗುತ್ತೆದೆ. ವಿದ್ಯುತ್ ತಂತಿಯ ಜೊತೆಗೆ ಸಂವಹನಗೊಂಡಾಗ ಹೇಗೆ ವಿದ್ಯುತ್ಕಾಂತೀಯ, ಶಾಖ, ಮತ್ತು ರಾಸಾಯನಿಕ ಪ್ರಭಾವಗಳಾಗುತ್ತವೋ ಹಾಗೆ ಪಂಚಮಹಾಭೂತಗಳು ಜೈವಿಕ ವ್ಯವಸ್ಥೆಯ ಒಳಗೆ ಸಂವಹನಗೊಂಡಾಗ ವಾತ-ಪಿತ್ತ ಮತ್ತು ಕಫದ…

Read More

ಸೈಟ್ ಖರೀದಿಸುವಾಗ ವಾಸ್ತು ವಿಶ್ಲೇಷಣೆ. ಮನೆ ಕಟ್ಟುವ ಮೊದಲು ಸೈಟ್ ಕೊಂಡುಕೊಳ್ಳುವಾಗ ಸೈಟ್ ಸುತ್ತಮುತ್ತಲಿರುವ ಹಾಗೂ ಸೈಟದ ಭೌಗೋಳಿಕ ಅಂಶಗಳಿಗೆ ಪ್ರಾಮುಖ್ಯತೆ ಕೊಡಲೇ ಬೇಕು. ಇಲ್ಲದಿದ್ದರೆ ಎಷ್ಟೇ ವಾಸ್ತು ಪ್ರಕಾರ ಮನೆ ಕಟ್ಟಿದರೂ ವಾಸ್ತುವಿನ ಫಲಿತಾಂಶವು ಎಳ್ಳಷ್ಟೂ ಸಿಗಲಾರದು. ಮನೆ ಹೇಗೆ ಕಟ್ಟಿಸುತ್ತೇವೆ ಅನ್ನುವುದಕಿಂತ ಯಾವ ರೀತಿ ಸೈಟ್ ಕೊಂಡುಕ್ಕೊಳ್ಳುತ್ತೇವೆ ಅನ್ನುವುದು ಅತಿ ಮುಖ್ಯವಾದದ್ದು. ಸೈಟ್ ಕೊಂಡುಕೊಳ್ಳುವ ಸಂದರ್ಭದಲ್ಲಿ ಕೆಲವು ಮುಖ್ಯವಾದ ಅಂಶಗಳನ್ನು ನಿರ್ಲಕ್ಷಿಸಿ ಸೈಟ್ ಖರೀದಿಸಿ ಮನೆ ಕಟ್ಟಿದರೆ ವಾಸ್ತು ದೋಷದಿಂದ ಉಂಟಾದ ಸಮಸ್ಯೆಗಳನ್ನು ಪರಿಹಾರ ಮಾಡುವುದು ಸುಲಭ ಸಾಧ್ಯವಿಲ್ಲ. ಸೈಟ್ ಖರೀದಿಸುವಾಗ ನಿರ್ಲಕ್ಷ್ಯ ಮಾಡಿ ಮನೆ ಕಟ್ಟಿದ ಮೇಲೆ ಗುರುಜಿ ಒಬ್ಬನನ್ನು ಮನೆಗೆ ಕರೆದುಕೊಂಡು ಬಂದು ಗುರೂಜಿ ಸೂಚನೆಯಂತೆ ಲಾಪಿಂಗ್ ಬುದ್ದ ಇಟ್ರೆ, ವಿಂಡ್ ಚಾಯ್ಮ್ ಹಾಕಿದ್ರೆ, ಚೀನಿ ನಾಣ್ಯವನ್ನು ತಿಜೋರಿಯಲ್ಲಿ ಇಟ್ರೆ, ಮನಿ ಪ್ಲಾಂಟ್ ನೇಟ್ರೆ, ಕೂದರೆಯ ಲಾಳವನ್ನು ಮನೆಯ ಹೊಸ್ತಿಲಕ್ಕೆ ಹೊಡೆದ್ರೆ, ಮನೆಯ ಮುಖ್ಯ ದ್ವಾರಕ್ಕೆ ಅಷ್ಟಭುಜಾಕೃತಿಯ ಕನ್ನಡಿ ಒಂದನ್ನು ಹಾಕಿದ್ರೆ ಧನಾತ್ಮಕ ಶಕ್ತಿಗಳು ಸಿಗುತ್ತವಾ?…

Read More

ಆತ್ಮವು ಎಂಟಿಮಟಿರಿಯಲ್ ಕಣಗಳ ಸಂಯೋಜನೆಯಿಂದಾಗಿದೆ. ಹೀಗಾಗಿ ಆತ್ಮವನ್ನು ವಿನಾಶ ಮಾಡಲು ಸಾಧ್ಯವಿಲ್ಲ. ವಿಜ್ಞಾನ ಕ್ಷೇತ್ರವು ನಿರಂತರವಾಗಿ ವಿಕಸನದ ಹಾದಿಯಲ್ಲಿ ಇರುತ್ತದೆ. ವಿಜ್ಞಾನದ ವಿಕಸನದ ಹಾದಿಯಲ್ಲಿ ಅನೇಕ ಸಂಶೋಧನೆಗಳು ಆದವು ಹೊರತು ಒಬ್ಬನಿಂದ ಆದ ಒಂದು ಸೌಂಶೋಧನೆ ಅಂತಿಮ ಅಂತ ನಿರ್ಧರಿಸಲ್ಪಡಲು ಸಾಧ್ಯವೇ ಇಲ್ಲ. ( Science is evolution and it is not ones credit) ನಿರಂತರವಾಗಿ ಆಗಲ್ಪಡುತ್ತಿರುವ ವಿಜ್ಞಾನದ ವಿಕಸನದಿಂದ ಭವಿಷ್ಯದಲ್ಲಿ ಬ್ರಹ್ಮಾಂಡದ ಆಚೆಗೆ ಇರುವ ಎಂಟಿಮಟಿರಿಯಲ್ ಜಗತ್ತು ಸೌಂಶೋಧನೆ ಆಗಲ್ಪಡುವದರಲ್ಲಿ ಸಂದೇಹವಿಲ್ಲ. ಅಕ್ಟೋಬರ್ 26, 1959ರಂದು ಅಮೇರಿಕಾದ ಇಬ್ಬರು ಅಣು ವಿಜ್ಞಾನಿಗಳು ಎಂಟಿಪ್ರೋಟಾನ್ ಸಂಶೋಧನೆ ಮಾಡಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದರು. ವಸ್ತುಗಳ ರಚನೆ ಎರಡು ತರ ಇರುತ್ತವೆ. ಒಂದು ಕಣ(particle) ಮತ್ತೊಂದು ವಿರುದ್ದ ಕಣ (antiparticle) ಎಂಬುದನ್ನು ಈ ವಿಜ್ಞಾನಿಗಳು ಆವಿಷ್ಕಾರ ಮಾಡಿದ್ದರು. ಅಕ್ಟೋಬರ್ 27, 1959ರಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಈ ಆವಿಷ್ಕಾರದ ಕುರಿತ ವರದಿ ಒಂದನ್ನು ಮಾಡಿತ್ತು ಈ ಒಂದು ಹೊಸ ಆವಿಸ್ಕಾರದ…

Read More

ಮೂಲತಃ ಸೊಗಲ ಸೋಮೇಶ್ವರನನ್ನು ರಾವಣನ ಬಂಟರು ಸ್ಥಾಪಿಸಿದ್ದು. ಇನ್ನೂ ಸೊಗಲ ಕ್ಷೇತ್ರವು ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾದ ಐತಿಹಾಸಿಕ ಹಾಗೂ ದೈವೀ ಶಕ್ತಿಗಳ ಸ್ಥಳ. ಇದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಹೋಬಳಿಯಿಂದ 8 ಕಿಲೋಮೀಟರ್ ದೂರದಲ್ಲಿ ಇರುವ ಒಂದು ಪುಣ್ಯ ಕ್ಷೇತ್ರ. ಇದು ಪ್ರಾಚೀನ ಕಾಲದಲ್ಲಿ ಧಾರ್ಮಿಕ ಹಾಗೂ ಶಿಕ್ಷಣ ಕೇಂದ್ರವಾಗಿತ್ತು. ಈ ಸೊಗಲ ಕ್ಷೇತ್ರದಲ್ಲಿ ಪ್ರಾಚೀನ ಕಾಲದಲ್ಲಿ ಸೊಗಲ ಎಂಬ ಋಷಿಮುನಿ ವಾಸವಾಗಿದ್ದರು. ಈ ಕಾರಣಕ್ಕಾಗಿ ಈ ಕ್ಷೇತ್ರಕ್ಕೆ ಸೊಗಲ ಎಂಬ ಹೆಸರು ಬಂದಿತು. ಈ ಕ್ಷೇತ್ರವನ್ನು ರಾಷ್ಟ್ರಕೂಟರು 6ರಿಂದ 10ನೇ ಶತಮಾನದಲ್ಲಿ ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಸೊಗಲ ಕ್ಷೇತ್ರದಲ್ಲಿ ಹಲವಾರು ದೇವಸ್ಥಾನಗಳಿದ್ದು ಇದರಲ್ಲಿ ಸೋಮೇಶ್ವರ ದೇವಸ್ಥಾನ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ.   ದಟ್ಟವಾದ ಕಾಡು ಹಾಗೂ ಪರ್ವತದಲ್ಲಿ ಈ ಸೋಮೇಶ್ವರ ದೇವಸ್ಥಾನ ಇದೆ. ಇಲ್ಲಿನ ಪ್ರಕೃತಿ ಸೌಂದರ್ಯವು ಜನರನ್ನು ತೀವ್ರವಾಗಿ ಆಕರ್ಷಿಸುತ್ತದೆ. ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ನಿರಂತರವಾಗಿ ಜನರು ಪ್ರತಿನಿತ್ಯ ಸೋಮೇಶ್ವರನ ದರ್ಶನ ಪಡೆಯಲು ಬರುತ್ತಿರುತ್ತಾರೆ.…

Read More

ಮನೆ ಕಟ್ಟಲಿಕ್ಕೆ ವೈಜ್ಞಾನಿಕ ವಾಸ್ತು ಸಲಹೆಗಳು. ಐಹಿಕ ಪ್ರಪಂಚದಲ್ಲಿ ಪ್ರತಿಯೊಂದು ವಸ್ತು ಹಾಗೂ ಪ್ರಾಣಿ-ಪಕ್ಷಿ ಮತ್ತು ಮನುಷ್ಯ ಜೀವಿ ಪಂಚಮಹಾಭೂತಗಳಾದ ನೀರು, ಗಾಳಿ, ಬೆಳಕು, ಆಕಾಶ ಮತ್ತು ಭೂಮಿಯಿಂದ ಆಗಲ್ಪಟ್ಟಿವೆ. ಈ ಪಂಚಮಹಾಭೂತಗಳ, ಪ್ರಕೃತಿಯ ಮತ್ತು ಮನುಷ್ಯನ ನಡುವೆ ಒಂದು ಪರಸ್ಪರ ಸಂಬಂಧ ಇರುವುದನ್ನು ಅಲ್ಲಗಳಿಯುವಂತಿಲ್ಲ. ಈ ಪಂಚಮಹಾಭೂತಗಳು ನಿಸರ್ಗದಲ್ಲಿ ಅಥವಾ ನಾವು ವಾಸಿಸುವ ನಿವೇಶನದಲ್ಲಿ ಸರಿಯಾಗಿ ಹಂಚಿಕೆಯಾಗಲ್ಪಡಬೇಕು. ಇಲ್ಲದಿದ್ದರೆ ತದ್ವಿರುದ್ಧ ಪ್ರಭಾವ ಆಗಲ್ಪಡುತ್ತದೆ. ಈ ಪಂಚಮಹಾಭೂತಗಳನ್ನು ನಿವೇಶನದಲ್ಲಿ ಅಥವಾ ಮನೆಯಲ್ಲಿ ಸರಿಯಾದ ರೀತಿಯಲ್ಲಿ ಹಂಚಿಕೆ ಮಾಡುವಂತಹ ತಂತ್ರಜ್ಞಾನವೇ ವಾಸ್ತುಶಾಸ್ತ್ರ. ಅಥವಾ ಮನೆಯಲ್ಲಿ ಧನಾತ್ಮಕ ಶಕ್ತಿಗಳ ಸಂಚಲನ ಉಂಟು ಮಾಡುವ ವಿಧಾನವೇ ವಾಸ್ತುಶಾಸ್ತ್ರ. 19 ನೇ ಶತಮಾನದಲ್ಲಿ ಇಡೀ ಜಗತ್ತು ಅನೇಕ ಯುದ್ಧಗಳಲ್ಲಿ ಮತ್ತು ಕೈಗಾರಿಕಾ ಕ್ರಾಂತಿಯಲ್ಲಿ ತೊಡಗಿತು ಇದರಿಂದ ಆಧ್ಯಾತ್ಮಿಕ ಜ್ಞಾನ ಮತ್ತು ಪ್ರಾಚೀನ ಕಾಲದ ಋಷಿಗಳು ಮನಕುಲಕ್ಕೆ ಪರಿಚಯಿಸಿದ ಹಾಗೂ ವಿಜ್ಞಾನಕ್ಕೆ ನಿಲುಕದ ಅನೇಕ ಗೌಪ್ಯ ವಿದ್ಯೆಗಳು ನಿಧಾನವಾಗಿ ಕಣ್ಮರೆಯಾಗಲು ಆರಂಭವಾದವು. ಎರಡನೇ ಮಾಹಾಯುದ್ಧ ಮುಗಿದ ಮೇಲೆ ಮನುಷ್ಯ…

Read More