ವಿಜ್ಞಾನದಿಂದ ದೀರ್ಘಾಯುಷಿಗಳಾಗಬಹುದು ಆದರೆ ಅಮರತ್ವವಿಲ್ಲ! ಭೌತಜಗತ್ತಿನಲ್ಲಿ ಜೀವಿಗಳು ಸೃಷ್ಟಿಯಾದ ಮೇಲೆ ಪ್ರತಿ ಜೀವಿಯು ಜೀವನವನ್ನು ಸಾಗಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದವೆ. ಆದರೆ ಮೃತ್ಯುವಿನ ಪಾಶದಿಂದ ಬಿಡಿಸಿಕೊಂಡು ಅಮರತ್ವವನ್ನು ಸಾಧಿಸಲಾರದಷ್ಟು ಪ್ರಕೃತಿಯ ನಿಯಮಗಳು ಬಲಿಷ್ಠವಾಗಿವೆ. ಪ್ರಕೃತಿಯ ನಿಯಮಕ್ಕೆ ಅನುಗುಣವಾಗಿ ಪ್ರತಿಯೊಬ್ಬರೂ ಮೃತ್ಯುವಿನ ಪಾಶಕ್ಕೆ ಒಳಗಾಗಬೇಕಾಗುತ್ತದೆ. ಈ ಭೌತಾಜಗತ್ತಿನಲ್ಲಿ ಯಾರೊಬ್ಬರೂ ಸಾಯಲು, ವೃದ್ದರಾಗಲು ಹಾಗೂ ಕಾಯಿಲೆಯಿಂದ ಬಳಲಲು ಇಷ್ಟಪಡುವುದಿಲ್ಲ. ಆದರೆ ಪ್ರಕೃತಿಯ ನಿಯಮಗಳಿಗೆ ಅನುಗುಣವಾಗಿ ಪ್ರತಿ ಜೀವಿಯೂ ಕಾಯಿಲೆ, ಮುಪ್ಪು ಹಾಗೂ ಸಾವನ್ನು ಎದುರಿಸಬೇಕಾಗುತ್ತದೆ. ಮನುಕುಲದ ಇತಿಹಾಸದಲ್ಲಿ ಕಾಯಿಲೆ, ಮುಪ್ಪು ಹಾಗೂ ಸಾವನ್ನು ಬರೆದಂತೆ ಮಾಡಿ ಅಮರತ್ವವನ್ನು ಸಾಧಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಅಂತಹ ಯಾವ ಪ್ರಯತ್ನಗಳು ಇಲ್ಲಿಯವರೆಗೆ ಯಶಸ್ಸು ಹೊಂದಲಿಲ್ಲ. ಹಾಗೂ ಭವಿಷ್ಯದಲ್ಲಿ ಅಮರತ್ವವನ್ನು ಯಾರೊಬ್ಬರೂ ಸಾಧಿಸಲಾರರು. ಏಕೆಂದರೆ ಯಾರೊಬ್ಬರೂ ಪ್ರಕೃತಿ ನಿಯಮಗಳನ್ನು ಮೀರಲು ಸಾಧ್ಯವಿಲ್ಲ. ಲೌಕಿಕವಾಗಿ ಮುಂದುವರೆದ ಹಿರಣ್ಯಕಶಿಪುವಿನ ಶಕ್ತಿ ಸಾಮರ್ಥ್ಯಗಳ ಕುರಿತು ಹಾಗೂ ಆತನ ಕಾರ್ಯಚಟುವಟಿಕೆಗಳ ಬಗ್ಗೆ ನಾವು ಪುರಾಣಗಳಲ್ಲಿ ಕೇಳಿದ್ದೇವೆ ಹಾಗೂ ಪುಣ್ಯ ಕಥೆಗಳಲ್ಲಿ ಓದಿದ್ದೇವೆ. ಆತ ಐಹಿಕ ಆಸೆಗಳಿಗೆ ಒಳಪಟ್ಟು ಹಾಗೂ ಅಜ್ಞಾನದಿಂದ ಮೃತ್ಯುವನ್ನು ಗೆಲ್ಲಬೇಕೆಂಬ ಉದ್ದೇಶದಿಂದ ಬ್ರಹ್ಮದೇವನ ಧ್ಯಾನದಲ್ಲಿ ಕುಳಿತನು. ಹಿರಣ್ಯಕಶಿಪುವಿನ ಧ್ಯಾನಕ್ಕೆ ಮೆಚ್ಚಿ ಬ್ರಹ್ಮದೇವನು ಪ್ರತ್ಯಕ್ಷನಾದನು. ಆಗ ಹಿರಣ್ಯಕಶಿಪನು ಬ್ರಹ್ಮನನ್ನು ಅಮರತ್ವದ ವರವನ್ನು ಕೇಳಿದನು. ಸಕಲ ಲೋಕಗಳನ್ನು ಆಳುವ ತಾನೇ ಅಮರನಲ್ಲವಾದ್ದರಿಂದ ಹಿರಣ್ಯಕಶಿಪುವಿಗೆ ಅಮರತ್ವದ ವರ ಕೊಡಲು ಸಾಧ್ಯವಿಲ್ಲವೆಂದು ಬ್ರಹ್ಮದೇವನು ಹೇಳಿದನು. ಭಗವದ್ಗೀತೆಯಲ್ಲಿ (8.17) ಬ್ರಹ್ಮದೇವನು ದೀರ್ಘಕಾಲ ಬದುಕುತ್ತಾನೆ ವಿನಃ ಅಮರನಲ್ಲ ಎಂದು ಇದೆ.

ಹಿರಣ್ಯ ಅಂದ್ರೆ ಚಿನ್ನ ಹಾಗೂ ಕಶಿಪು ಅಂದ್ರೆ ಹಾಸಿಗೆ ಎಂದಾಗುತ್ತದೆ. ಹೀಗಾಗಿ ಹಿರಣ್ಯಕಶಿಪು ಹಣ ಮತ್ತು ಹೆಣ್ಣಿನಲ್ಲಿ ವಿಪರೀತ ಆಸಕ್ತಿ ಹೊಂದಿದ್ದ. ಆತ ಅಮರನಾಗಿ ಇವೆರಡರ ಆನಂದವನ್ನು ಯಥೇಚ್ಛವಾಗಿ ಅನುಭವಿಸುವ ಇಚ್ಛೆಯನ್ನು ಹೊಂದಿದ್ದನು. ಆದ್ದರಿಂದ ಅಮರವನ್ನು ಹೊಂದುವ ಬಯಕೆಯನ್ನು ಇಟ್ಟುಕೊಂಡು ಬ್ರಹ್ಮದೇವನ ಬಳಿ ಪರೋಕ್ಷವಾಗಿ ಅನೇಕ ಪ್ರಶ್ನೆಗಳನ್ನು ಕೇಳಿದನು. ಅಮರತ್ವದ ವರವನ್ನು ಕೊಡಲು ಸಾಧ್ಯವಿಲ್ಲವೆಂದು ಬ್ರಹ್ಮನು ಹೇಳಿದ್ದರಿಂದ ತನಗೆ ಯಾವುದೇ ಮನುಷ್ಯನಿಂದ, ಪ್ರಾಣಿಯಿಂದ, ದೇವರಿಂದ, ಯಾವುದೇ 84 ಕೋಟಿ ಸಹಸ್ರ ಜೀವಿಗಳಿಂದ ಸಾವು ಬರದಂತೆ ಹಾಗೂ ಭೂಮಿಯ ಮೇಲಾಗಲಿ, ಆಕಾಶದಲ್ಲಾಗಲಿ, ನೀರಿನಲ್ಲಾಗಲಿ, ಮತ್ತು ಯಾವುದೇ ಶಸ್ತ್ರಾಸ್ತ್ರಗಳಿದಿಂದಾಗಲಿ ಸಾವು ಬರದಂತೆ ವರ ಕೊಡಬೇಕೆಂದು ಹಿರಣ್ಯಕಶಿಪು ಬ್ರಹ್ಮದೇವನಲ್ಲಿ ಕೇಳುತ್ತಾನೆ. ಹೀಗೆ ಹಿರಣ್ಯಕಶಿಪು ಇಂತಹ ಭಾವನೆಗಳ ಕಲ್ಪನಾಲೋಕಕ್ಕೆ ಒಳಪಟ್ಟು ಮೃತ್ಯುವಿನಿಂದ ತಪ್ಪಿಸಿಕೊಂಡು ಅಮರತ್ವವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂಬ ಅಜ್ಞಾನ ಹಾಗೂ ಮೂರ್ಖತನವನ್ನು ಹೊಂದಿದ್ದ. ಕಡೆಗೆ ನರಸಿಂಹ ದೇವನ ರೂಪದಲ್ಲಿ ಬಂದು ಭಗವಂತನಿಂದ ಹಿರಣ್ಯಕಶಿಪು ಕೊಲ್ಲಲ್ಪಟ್ಟ. ಹಿರಣ್ಯಕಶಿಪುವನ್ನು ಆಕಾಶದಲ್ಲಾಗಲಿ, ಭೂಮಿಯ ಮೇಲಾಗಲಿ ನಿರಿನಲ್ಲಾಗಲಿ ಕೊಲ್ಲದೆ ಕಲ್ಪನೆಗೆ ಮೀರಿದ ಅದ್ಬುತ ಜೀವಿಯ ರೂಪದಲ್ಲಿ ಭಗವಂತನು ಬಂದು ತನ್ನ ತೊಡೆಯ ಮೇಲೆ ಹಿರಣ್ಯಕಶಿಪುನನ್ನು ಇಟ್ಟುಕೊಂಡು ಉಗುರುಗಳಿಂದ ಬಗೆದು ಕೊಂದುಹಾಕಿದನು. ಮಹಾಶಕ್ತಿಶಾಲಿಯಾದ ಹಿರಣ್ಯಕಶಿಪು ಬ್ರಹ್ಮದೇವನಿಂದ ವರಪಡೆದು ಅಮರನಾಗಲು ಸಾಧ್ಯವಾಗಲಿಲ್ಲ. ಇನ್ನು ಕ್ಷಣಕ್ಷಣಕ್ಕೂ ಅಮರತ್ವದ ಕುರಿತು ಸಂಶೋಧನೆಗಳನ್ನು ಮಾಡುತ್ತಿರುವ ನಮ್ಮ ನಾಸ್ತಿಕ ವಿಜ್ಞಾನಿಗಳಿಗೆ ಅಮರತ್ವವನ್ನು ಸಾಧಿಸಲು ಸಾಧ್ಯವಿದೆನಾ? ನಿಸರ್ಗ ನಿಯಮಗಳ ಪ್ರಕಾರ ಅಮರತ್ವವನ್ನು ಹೊಂದಲು ಸಾಧ್ಯವಿಲ್ಲ ಆದರೆ ಅನಾದಿಕಾಲದಿಂದ ಅಮರತ್ವವನ್ನು ಸಾಧಿಸುವ ಸಂಶೋಧನೆಗಳು ನಿರಂತರವಾಗಿ ಸಾಗುತ್ತಿವೆ.
ಕಾಲಗತಿ ಮುಂದೆ ಸಾಗಿದಂತೆ ದೇಹದಲ್ಲಿ ಜೈವಿಕ ರಸಾಯನ ಕ್ರಿಯೆ ಕುಂಠಿತಗೊಳ್ಳುತ್ತಾ ಮುಪ್ಪು ಬಂದು ಕಟ್ಟಕಡೆಗೆ ಸಾವು ಬರುತ್ತದೆ. ಎಷ್ಟೇ ವಿಜ್ಞಾನ ಮುಂದುವರೆದರು ಜೈವಿಕ ರಾಸಾಯನಿಕ ಕ್ರಿಯೆಯನ್ನು ಸ್ಥಿರೀಕರಣಗೊಳಿಸಿ ರೋಗ, ಮುಪ್ಪು ಹಾಗೂ ಸಾವು ಬರದಂತೆ ಮಾಡಲು ಸಾಧ್ಯವೇ ಇಲ್ಲ. ಆದರೆ ಹ್ಯೂಮನ್ ಗ್ರೋಥ್ ಹಾರ್ಮೋನಗಳ ಮೂಲಕ ಜೀವರಸಾಯನ ಕ್ರಿಯೆಯನ್ನು ದೀರ್ಘಕಾಲದವರೆಗೆ ಸ್ಥಿರೀಕರಣಗೊಳಿಸಿ ಮುಪ್ಪನ್ನು ಮುಂದಕ್ಕೆ ದುಡಬಹುದಾ? ವಿಜ್ಞಾನಿಗಳಿಂದ ಮುಪ್ಪನ್ನು ಮುಂದಕ್ಕೆ ನೋಡಬಲ್ಲ ಹ್ಯೂಮನ್ ಗ್ರೋಥ್ ಹಾರ್ಮೋನಿನ ಸಂಶೋಧನೆ ಸಾಧ್ಯವಾ? ಯಾವುದಾದರು ವನಸ್ಪತಿಯಲ್ಲಿ ಇಂತಹ ಹ್ಯೂಮನ್ ಗ್ರೋಥ್ ಹಾರ್ಮೋನ ಇರಬಹುದಾ? ಮುಪ್ಪನ್ನು ಮುಂದಕ್ಕೆ ದುಡಬಲ್ಲ ಸಂಶೋಧನೆ ಆದರೆ ಹ್ಯೂಮನ್ ಗ್ರೋಥ್ ಹಾರ್ಮೋನಿನಿಂದ ಏಷ್ಟು ದಿನ ಮುಪ್ಪನ್ನು ಮುಂದಕ್ಕೆ ಮೂಡಲು ಸಾಧ್ಯ? ಇಂತಹ ವಿಚಾರಗಳು ಮನುಕುಲದಲ್ಲಿ ಆಸಕ್ತಿಯನ್ನು ಕೆರಳಿಸುತ್ತವೆ. ಆದರೆ ಯುಗಯುಗಗಳಿಂದ ಸಾವನ್ನು ಗೆಲ್ಲಲ್ಲುವ ಹಾಗೂ ಮುಪ್ಪನ್ನು ಮುಂದಕ್ಕೆ ದೂಡುವ ಮಾನವನು ಎಲ್ಲ ಪ್ರಯತ್ನಗಳು ಇಲ್ಲಿಯವರೆಗೆ ಯಶಸ್ವಿಯಾಗಲಿಲ್ಲ.
ಮುಪ್ಪನ್ನು ಮುಂದಕ್ಕೆ ದೂಡುವ ಹ್ಯೂಮನ್ ಗ್ರೋಥ್ ಹಾರ್ಮೋನಿನಿಂದ ದೀರ್ಘಾಯುಷ್ಯವನ್ನು ಹೊಂದಬಹುದು ವಿನಃ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಏಕೆಂದರೆ ದೇಹವು ಪಂಚಮಹಾಭೂತಗಳಿಂದ ಆಗಿರುತ್ತದೆ.ಭೌತಜಗತ್ತಿನಲ್ಲಿ ಜೀವಿಗಳು ಸೃಷ್ಟಿಯಾದ ಮೇಲೆ ಪ್ರತಿ ಜೀವಿಯು ಜೀವನವನ್ನು ಸಾಗಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾವೆ. ಆದರೆ ಮೃತ್ಯುವಿನ ಪಾಶದಿಂದ ಬಿಡಿಸಿಕೊಂಡು ಅಮರತ್ವವನ್ನು ಸಾಧಿಸಲಾರದಷ್ಟು ಪ್ರಕೃತಿಯ ನಿಯಮಗಳು ಬಲಿಷ್ಠವಾಗಿವೆ. ಪ್ರಕೃತಿಯ ನಿಯಮಕ್ಕೆ ಅನುಗುಣವಾಗಿ ಪ್ರತಿಯೊಬ್ಬರೂ ಮೃತ್ಯುವಿನ ಪಾಶಕ್ಕೆ ಒಳಗಾಗಬೇಕಾಗುತ್ತದೆ. ಈ ಭೌತಾಜಗತ್ತಿನಲ್ಲಿ ಯಾರೊಬ್ಬರೂ ಸಾಯಲು ಇಷ್ಟಪಡುವುದಿಲ್ಲ. ವೃದ್ದರಾಗಲು ಹಾಗೂ ಕಾಯಿಲೆಯಿಂದ ಬಳಲಲು ಇಷ್ಟಪಡುವುದಿಲ್ಲ. ಆದರೆ ಪ್ರಕೃತಿಯ ನಿಯಮಗಳಿಗೆ ಅನುಗುಣವಾಗಿ ಪ್ರತಿ ಜೀವಿಯೂ ಕಾಯಿಲೆ, ಮುಪ್ಪು ಹಾಗೂ ಸಾವನ್ನು ಎದುರಿಸಬೇಕಾಗುತ್ತದೆ. ಮನುಕುಲದ ಇತಿಹಾಸದಲ್ಲಿ ಕಾಯಿಲೆ ಮುಪ್ಪು ಹಾಗೂ ಸಾವನ್ನು ಬರೆದಂತೆ ಮಾಡಿ ಅಮರತ್ವವನ್ನು ಸಾಧಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಅದು ಸಾಧ್ಯವಾಗಲಿಲ್ಲ ಮತ್ತು ಭವಿಷ್ಯದಲ್ಲಿ ಅಮರತ್ವವನ್ನು ಯಾರೊಬ್ಬರೂ ಸಾಧಿಸಲಾರರು. ಏಕೆಂದರೆ ಯಾರೊಬ್ಬರೂ ಪ್ರಕೃತಿ ನಿಯಮಗಳನ್ನು ಮೀರಲು ಸಾಧ್ಯವಿಲ್ಲ. ಲೌಕಿಕವಾಗಿ ಮುಂದುವರೆದ ಹಿರಣ್ಯಕಶಿಪುವಿನ ಶಕ್ತಿ ಸಾಮರ್ಥ್ಯಗಳ ಕುರಿತು ಹಾಗೂ ಆತನ ಕಾರ್ಯಚಟುವಟಿಕೆಗಳ ಬಗ್ಗೆ ನಾವು ಪುರಾಣಗಳಲ್ಲಿ ಕೇಳಿದ್ದೇವೆ. ಆತ ಐಹಿಕ ಆಸೆಗಳಿಗೆ ಒಳಪಟ್ಟು ಹಾಗೂ ಅಜ್ಞಾನದಿಂದ ಮೃತ್ಯುವನ್ನು ಗೆಲ್ಲಬೇಕೆಂಬ ಉದ್ದೇಶದಿಂದ ಬ್ರಹ್ಮದೇವನ ಧ್ಯಾನದಲ್ಲಿ ಕುಳಿತನು. ಹಿರಣ್ಯಕಶಿಪುವಿನ ಧ್ಯಾನಕ್ಕೆ ಮೆಚ್ಚಿ ಬ್ರಹ್ಮದೇವನು ಪ್ರತ್ಯಕ್ಷನಾದನು. ಆಗ ಹಿರಣ್ಯಕಶಿಪುನು ಬ್ರಹ್ಮನನ್ನು ಅಮರತ್ವದ ವರವನ್ನು ಕೇಳಿದನು. ಸಕಲ ಲೋಕಗಳನ್ನು ಆಳುವ ತಾನೇ ಅಮರನಲ್ಲವಾದ್ದರಿಂದ ಹಿರಣ್ಯಕಶಿಪುವಿಗೆ ಅಮರತ್ವದ ವರ ಕೊಡಲು ಸಾಧ್ಯವಿಲ್ಲವೆಂದು ಬ್ರಹ್ಮದೇವನು ಹೇಳಿದನು. ಭಗವದ್ಗೀತೆಯಲ್ಲಿ (8.17) ಬ್ರಹ್ಮದೇವನು ದೀರ್ಘಕಾಲ ಬದುಕುತ್ತಾನೆ ವಿನಃ ಅಮರನಲ್ಲ ಎಂದು ಇದೆ.
ಹಿರಣ್ಯ ಅಂದ್ರೆ ಚಿನ್ನ ಹಾಗೂ ಕಶಿಪು ಅಂದ್ರೆ ಹಾಸಿಗೆ ಎಂದಾಗುತ್ತದೆ. ಹೀಗಾಗಿ ಹಿರಣ್ಯಕಶಿಪು ಹಣ ಮತ್ತು ಹೆಣ್ಣಿನಲ್ಲಿ ವಿಪರೀತ ಆಸಕ್ತಿ ಹೊಂದಿದ್ದ. ಆತ ಅಮರನಾಗಿ ಇವೆರಡರ ಆನಂದವನ್ನು ಯಥೇಚ್ಛವಾಗಿ ಅನುಭವಿಸುವ ಇಚ್ಛೆಯನ್ನು ಹೊಂದಿದ್ದನು. ಆದ್ದರಿಂದ ಅಮರವನ್ನು ಹೊಂದುವ ಬಯಕೆಯನ್ನು ಇಟ್ಟುಕೊಂಡು ಬ್ರಹ್ಮದೇವನ ಬಳಿ ಪರೋಕ್ಷವಾಗಿ ಅನೇಕ ಪ್ರಶ್ನೆಗಳನ್ನು ಕೇಳಿದನು. ಅಮರತ್ವದ ವರವನ್ನು ಕೊಡಲು ಸಾಧ್ಯವಿಲ್ಲವೆಂದು ಬ್ರಹ್ಮನು ಹೇಳಿದ್ದರಿಂದ ತನಗೆ ಯಾವುದೇ ಮನುಷ್ಯನಿಂದ, ಪ್ರಾಣಿಯಿಂದ, ದೇವರಿಂದ, ಯಾವುದೇ 84 ಕೋಟಿ ಸಹಸ್ರ ಜೀವಿಗಳಿಂದ ಸಾವು ಬರದಂತೆ ಹಾಗೂ ಭೂಮಿಯ ಮೇಲಾಗಲಿ, ಆಕಾಶದಲ್ಲಾಗಲಿ, ನೀರಿನಲ್ಲಾಗಲಿ, ಮತ್ತು ಯಾವುದೇ ಶಸ್ತ್ರಾಸ್ತ್ರಗಳಿದಿಂದಾಗಲಿ ಸಾವು ಬರದಂತೆ ವರ ಕೊಡಬೇಕೆಂದು ಹಿರಣ್ಯಕಶಿಪು ಬ್ರಹ್ಮದೇವನಲ್ಲಿ ಕೇಳುತ್ತಾನೆ. ಹೀಗೆ ಹಿರಣ್ಯಕಶಿಪು ಇಂತಹ ಭಾವನೆಗಳ ಕಲ್ಪನಾಲೋಕಕ್ಕೆ ಒಳಪಟ್ಟು ಮೃತ್ಯುವಿನಿಂದ ತಪ್ಪಿಸಿಕೊಂಡು ಅಮರತ್ವವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂಬ ಅಜ್ಞಾನ ಹಾಗೂ ಮೂರ್ಖತನವನ್ನು ಹೊಂದಿದ್ದ. ಕಡೆಗೆ ನರಸಿಂಹ ದೇವನ ರೂಪದಲ್ಲಿ ಬಂದು ಭಗವಂತನಿಂದ ಹಿರಣ್ಯಕಶಿಪು ಕೊಲ್ಲಲ್ಪಟ್ಟ. ಹಿರಣ್ಯಕಶಿಪುವನ್ನು ಆಕಾಶದಲ್ಲಾಗಲಿ, ಭೂಮಿಯ ಮೇಲಾಗಲಿ ನಿರಿನಲ್ಲಾಗಲಿ ಕೊಲ್ಲದೆ ಕಲ್ಪನೆಗೆ ಮೀರಿದ ಅದ್ಬುತ ಜೀವಿಯ ರೂಪದಲ್ಲಿ ಭಗವಂತನು ಬಂದು ತನ್ನ ತೊಡೆಯ ಮೇಲೆ ಹಿರಣ್ಯಕಶಿಪುನನ್ನು ಇಟ್ಟುಕೊಂಡು ಉಗುರುಗಳಿಂದ ಬಗೆದು ಕೊಂದುಹಾಕಿದನು. ಮಹಾಶಕ್ತಿಶಾಲಿಯಾದ ಹಿರಣ್ಯಕಶಿಪು ಬ್ರಹ್ಮದೇವನಿಂದ ವರಪಡೆದು ಅಮರನಾಗಲು ಸಾಧ್ಯವಾಗಲಿಲ್ಲ. ಇನ್ನು ಕ್ಷಣಕ್ಷಣಕ್ಕೂ ಅಮರತ್ವದ ಕುರಿತು ಸಂಶೋಧನೆಗಳನ್ನು ಮಾಡುತ್ತಿರುವ ನಮ್ಮ ನಾಸ್ತಿಕ ವಿಜ್ಞಾನಿಗಳಿಗೆ ಅಮರತ್ವವನ್ನು ಸಾಧಿಸಲು ಸಾಧ್ಯವಿದೆನಾ? ನಿಸರ್ಗ ನಿಯಮಗಳ ಪ್ರಕಾರ ಅಮರತ್ವವನ್ನು ಹೊಂದಲು ಸಾಧ್ಯವಿಲ್ಲ ಆದರೆ ಅನಾದಿಕಾಲದಿಂದ ಅಮರತ್ವವನ್ನು ಸಾಧಿಸುವ ಸಂಶೋಧನೆಗಳು ನಿರಂತರವಾಗಿ ಸಾಗುತ್ತಿವೆ.

ಕಾಲಗತಿ ಮುಂದೆ ಸಾಗಿದಂತೆ ದೇಹದಲ್ಲಿ ಜೈವಿಕ ರಸಾಯನ ಕ್ರಿಯೆ ಕುಂಠಿತಗೊಳ್ಳುತ್ತಾ ಮುಪ್ಪು ಬಂದು ಕಟ್ಟಕಡೆಗೆ ಸಾವು ಬರುತ್ತದೆ. ಎಷ್ಟೇ ವಿಜ್ಞಾನ ಮುಂದುವರೆದರು ಜೈವಿಕ ರಾಸಾಯನಿಕ ಕ್ರಿಯೆಯನ್ನು ಸ್ಥಿರೀಕರಣಗೊಳಿಸಿ ರೋಗ, ಮುಪ್ಪು ಹಾಗೂ ಸಾವು ಬರದಂತೆ ಮಾಡಲು ಸಾಧ್ಯವೇ ಇಲ್ಲ. ಆದರೆ ಹ್ಯೂಮನ್ ಗ್ರೋಥ್ ಹಾರ್ಮೋನಗಳ ಮೂಲಕ ಜೀವರಸಾಯನ ಕ್ರಿಯೆಯನ್ನು ದೀರ್ಘಕಾಲದವರೆಗೆ ಸ್ಥಿರೀಕರಣಗೊಳಿಸಿ ಮುಪ್ಪನ್ನು ಮುಂದಕ್ಕೆ ದೂಡಬಹುದಾ? ವಿಜ್ಞಾನಿಗಳಿಂದ ಮುಪ್ಪನ್ನು ಮುಂದಕ್ಕೆ ದೂಡುವ ಹ್ಯೂಮನ್ ಗ್ರೋಥ್ ಹಾರ್ಮೋನಿನ ಸಂಶೋಧನೆ ಸಾಧ್ಯವಾ? ಯಾವುದಾದರು ವನಸ್ಪತಿಯಲ್ಲಿ ಇಂತಹ ಹ್ಯೂಮನ್ ಗ್ರೋಥ್ ಹಾರ್ಮೋನ ಇರಬಹುದಾ? ಮುಪ್ಪನ್ನು ಮುಂದಕ್ಕೆ ದೂಡಬಲ್ಲ ಸಂಶೋಧನೆ ಆದರೆ ಹ್ಯೂಮನ್ ಗ್ರೋಥ್ ಹಾರ್ಮೋನಿನಿಂದ ಏಷ್ಟು ದಿನ ಮುಪ್ಪನ್ನು ಮುಂದಕ್ಕೆ ದೂಡಲು ಸಾಧ್ಯ? ಇಂತಹ ವಿಚಾರಗಳು ಮನುಕುಲದಲ್ಲಿ ಆಸಕ್ತಿಯನ್ನು ಕೆರಳಿಸುತ್ತವೆ. ಆದರೆ ಯುಗಯುಗಗಳಿಂದ ಸಾವನ್ನು ಗೆಲ್ಲಲ್ಲುವ ಹಾಗೂ ಮುಪ್ಪನ್ನು ಮುಂದಕ್ಕೆ ದೂಡುವ ಮಾನವನು ಎಲ್ಲ ಪ್ರಯತ್ನಗಳು ಇಲ್ಲಿಯವರೆಗೆ ಯಶಸ್ವಿಯಾಗಲಿಲ್ಲ. ಮುಪ್ಪನ್ನು ಮುಂದಕ್ಕೆ ದೂಡುವ ಹ್ಯೂಮನ್ ಗ್ರೋಥ್ ಹಾರ್ಮೋನ ಸಂಶೋಧನೆ ಆದರೆ ದೀರ್ಘಾಯುಷ್ಯವನ್ನು ಹೊಂದಬಹುದು ವಿನಃ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಏಕೆಂದರೆ ದೇಹವು ಭೂಮಿ, ನೀರು, ಗಾಳಿ, ಆಕಾಶ, ಆಗ್ನಿ ಎಂಬ ಪಂಚಮಹಾಭೂತಗಳಿಂದ ಆಗಿರುತ್ತದೆ. ಪ್ರಕೃತಿ ನಿಯಮಗಳ ಪ್ರಕಾರ ಶರೀರದಲ್ಲಿರುವ ಈ ಪಂಚಮಹಾಭೂತಗಳು ನಿಸರ್ಗದಲ್ಲಿ ಇರುವ ಪಂಚಮಹಾಭೂತಗಳ ಜೊತೆಗೆ ಕಟ್ಟಕಡೆಗೆ ಲೀನವಾಗಬೇಕು.
ಬ್ಯಾಟರಿಯಲ್ಲಿ ರಾಸಾಯನಿಕ ಕ್ರಿಯೆ ಕುಂಠಿತಗೊಂಡು ವಿದ್ಯುತ್ ಶಕ್ತಿ ಕಡಿಮೆಯಾದಾಗ ನಾವು ಬ್ಯಾಟರಿಗೆ ಒಂದು ಅಥವಾ ಎರಡು ಬಾರಿ ಡಿಸ್ಟಿಲ್ಡ್ ವಾಟರ್ ಹಾಕಿದಾಗ ಪುನಃ ಬ್ಯಾಟರಿಯು ಸಕ್ರಿಯಗೊಂಡರೂ ಕಟ್ಟಕಡೆಗೆ ಬ್ಯಾಟರಿಯು ಹೇಗೆ ನಿಷ್ಕ್ರಿಯಗೊಳ್ಳುತ್ತೋ ಅದೇ ರೀತಿ ಮುಪ್ಪನ್ನು ಮುಂದಕ್ಕೆ ದೂಡುವ ಹ್ಯೂಮನ್ ಗ್ರೋಥ್ ಹಾರ್ಮೋನನ್ನು ಒಂದೆರಡು ಬಾರಿ ದೇಹಕ್ಕೆ ಹಾಕಿ ಮುಪ್ಪನ್ನು ಮುಂದಕ್ಕೆ ದೂಡಬಹುದು ಅಷ್ಟೇ ಆದರೆ ಅಮರತ್ವವನ್ನು ಹೊಂದಲು ಸಾಧ್ಯವಿಲ್ಲ. ಮುಪ್ಪನ್ನು ಮುಂದಕ್ಕೆ ದೂಡುವ ಈ ಹ್ಯೂಮನ್ ಗ್ರೋಥ್ ಹಾರ್ಮೋನ ಭವಿಷ್ಯದಲ್ಲಿ ಖಂಡಿತವಾಗಿಯೂ ಸಂಶೋಧನೆ ಆಗೆ ಆಗುತ್ತೆ ಅಂತ ಹೇಳಲು ಸಾಧ್ಯವಿಲ್ಲ. ಆದರೆ ಅಷ್ಟಾಂಗ ಯೋಗವನ್ನು ಸಿದ್ಧಿ ಮಾಡಿಕೊಂಡು ಮನಸಿನ ಮೇಲೆ ನಿಯಂತ್ರಣ ಹೊಂದಿದ ಸಾಧಕನು ಖಂಡಿತವಾಗಿ ಮುಪ್ಪನ್ನು ಮುಂದಕ್ಕೆ ದೊಡ್ಡಬಲ್ಲ. ಅಷ್ಟಾಂಗ ಯೋಗದಿಂದ ನಾವು ಮಾನಸಿಕ ಒತ್ತಡ, ಖಿನ್ನತೆ, ದ್ವೇಷ, ಶತ್ರುತ್ವ, ಮುಂತಾದ ಋಣಾತ್ಮಕ ಅಂಶಗಳನ್ನು ಕಡಿಮೆ ಮಾಡುವ ಮೂಲಕ ಮನಸ್ಸನ್ನು ನಿರುದ್ವೇಗ ಸ್ಥಿತಿಗೆ ತಲುಪಿಸಿದರೆ ದೇಹದಲ್ಲಿ ನಡೆಯುವ ಜೈವಿಕ ರಾಸಾಯನಿಕ ಕ್ರಿಯೆಯು ದೀರ್ಘಕಾಲದವರೆಗೆ ಸ್ಥಿರೀಕರಣಗೊಂಡು ದೀರ್ಘಾಯುಷ್ಯ, ಆರೋಗ್ಯ, ಆಂತರಿಕ ಶಾಂತಿ, ನೆಮ್ಮದಿ, ಪ್ರಾಪ್ತಿಯಾಗಿ ಬಿಡುತ್ತವೆ. ಕೇವಲ ಅಜ್ಞಾನಿಗಳು ಮತ್ತು ಅಂಧಕಾರದಲ್ಲಿ ಮುಳುಗಿದವರು ಅಮರತ್ವವನ್ನು ಸಾಧಿಸುವ ಹುಚ್ಚು ಪ್ರಯತ್ನಗಳನ್ನು ಅನಾದಿ ಕಾಲದಿಂದ ಮಾಡುತ್ತಾ ಬಂದಿದ್ದಾರೆ. ನಿಸರ್ಗಕ್ಕೆ ವಿರುದ್ಧವಾದ ಇಂತಹ ಸಾಧನೆಗಳ ಪ್ರಯತ್ನಗಳನ್ನು ಬಿಟ್ಟು ಆಹಾರ ಸೇವನೆ ಮೇಲೆ ಹಿಡಿತ ಸಾಧಿಸಿ ಸನ್ಮಾರ್ಗದಲ್ಲಿ ನಡೆದು ಯೋಗ ಧ್ಯಾನ ಮತ್ತು ಆಧ್ಯಾತ್ಮಿಕ ಜೀವನದ ಮೂಲಕ ದೀರ್ಘಾಯುಷ್ಯಗಳಾಗಿ ಆಂತರಿಕ ನೆಮ್ಮದಿ ಹಾಗೂ ಮನಃಶಾಂತಿಯನ್ನು ಅನುಭವಿಸುತ್ತಾ ಬಾಳಿ ಬದುಕುವ ಮೂಲಕ ಹುಟ್ಟು-ಸಾವುಗಳಿಂದ ಮುಕ್ತಿಯನ್ನು ಪಡೆಯುವ ಸಾಧನೆ ಮಾಡಿದರೆ ಐಹಿಕ ಪ್ರಪಂಚದ ಜಂಜಾಟಗಳನ್ನು ಒಳಗೊಂಡ ಜೀವನದ ಅಧ್ಯಾಯ ಮುಕ್ತಾಯವಾಗುತ್ತದೆ.
👇ಅಮರತ್ವ ಸಾಧ್ಯವಿಲ್ಲದಿದ್ದರೂ ಕರ್ಮಬಂಧನದಿಂದ ಬಿಡುಗಡೆ ಹೊಂದಲು ಸಾಧ್ಯ.