ಮಹಾಋಷಿ ಭರದ್ವಾಜ್ ವೈಮಾನಿಕ ಶಾಸ್ತ್ರ – ದಶಕಗಳ ಹಿಂದೆ ಆಫಘಾನಿಸ್ತಾನದ ಗುಹೆಯಲ್ಲಿ ಆಕಸ್ಮಿಕವಾಗಿ ಸಿಕ್ಕ 5 ಸಾವಿರ ವರ್ಷಗಳ ಹಿಂದಿನ ಕಾಲದ ವಿಮಾನವನ್ನು ಗುಹೆಯಿಂದ ಹೊರತರಲು ಪ್ರಯತಿಸಿದ ಅಮೆರಿಕಾದ 8 ಜನ ಮಿಲಿಟರಿ ಯೋಧರು ಕಣ್ಣಿಗೆ ಕಾಣದಂತೆ ಅದೃಶ್ಯರಾಗಿ ಹೋದರು. ಮಹಾಭಾರತದ ಕುರಿತು ನಂಬಿಕೆ ಇಲ್ಲದವರು ಹಾಗೂ ಎಲ್ಲದಕ್ಕೂ ವೈಜ್ಞಾನಿಕ ಆಧಾರ ಕೇಳುವ ನಾಸ್ತಿಕರು Ancient plane found in Afghanistan cave ಅಂತ ಒಂದು ಸತಿ ಗೂಗಲ್ ಸರ್ಚ್ ಕೊಟ್ಟುಬಿಡಿ! ಭಾರತದ ಪ್ರಾಚೀನ ಏರೋನಾಟಿಕ್ಸ್ ತಂತ್ರಜ್ಞಾನವು ಇವತ್ತಿನ ಸೈನ್ಸ್ ಆಫ್ ಏರೋನಾಟಿಕ್ಸ್ಗಿಂತಲೂ ಉನ್ನತವಾಗಿತ್ತು ಅನ್ನುವುದರಲ್ಲಿ ಸ್ವಲ್ಪವೂ ಅನುಮಾನವಿಲ್ಲ. ಐದು ಸಾವಿರ ವರ್ಷಗಳಿಗಿಂತ ಹಿಂದಿನಿಂದ ಭಾರತೀಯರಿಗೆ ಬೇರೆ ಬೇರೆ ರೀತಿಯ ವಿಮಾನಗಳ ಕುರಿತು ಅತ್ಯುನ್ನತ ತಂತ್ರಜ್ಞಾನ ಗೊತ್ತಿತ್ತು ಎಂಬುದು ಜಗತ್ತಿನ ಮುಂದುವರಿದ ರಾಷ್ಟ್ರವಾದ ಅಮೇರಿಕಾಗೆ ಅರ್ಥವಾಗಿದೆ. ಆದ್ದರಿಂದಲೇ ಅಮೆರಿಕಾ ಅಪಘಾನಿಸ್ತಾನದ ಗುಹೆಯಲ್ಲಿ ಸಿಕ್ಕ ವಿಮಾನದ ಕುರಿತು ಸಂಶೋಧನೆಗಳನ್ನು ಮಾಡುವ ಪ್ರಯತ್ನಗಳನ್ನು ಮಾಡಿತು. ಸ್ವತಃ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮ ಅವರು ರಹಸ್ಯವಾಗಿ ಅಪಘಾನಿಸ್ತಾಕ್ಕೆ ಭೇಟಿಕೊಟ್ಟು ವಿಮಾನವಿದ್ದ ಗುಹೆಯನ್ನು ಹೊರಗಿನಿಂದ ವೀಕ್ಷಿಸಿ, ಜಗತ್ತಿನ ಮತ್ತ್ಯಾವ ದೇಶಕ್ಕೂ ಗೊತ್ತಾಗದ ಹಾಗೆ ಸದ್ದಿಲ್ಲದೆ ಮರಳಿ ಅಮೆರಿಕಕ್ಕೆ ಹೋಗಿದ್ದರು. 2012 ರಲ್ಲಿ ಬರಾಕ್ ಒಬಾಮಾ ಅವರು ಅಪಘಾನಿಸ್ತಾನಕ್ಕೆ ರಹಸ್ಯವಾಗಿ ಭೇಟಿ ಕೊಡುವ ಕುರಿತು ರಷ್ಯಾದ ಗೂಢಚಾರಿ ಏಜೆನ್ಸಿ ಕೆಜಿಬಿ ತನಿಖೆ ನಡೆಸಿ ಒಬಾಮಾ ಜಗತ್ತಿಗೆ ಗೊತ್ತಿಲ್ಲದ ಹಾಗೆ ಅಫಘಾನಿಸ್ತಾನಕ್ಕೆ ಅತ್ಯಂತ ರಹಸ್ಯವಾಗಿ ಭೇಟಿ ಕೊಡುತ್ತಿದ್ದಾರೆ ಎಂಬುದನ್ನು ವ್ಲಾಡಿಮಿರ್ ಪುಟಿನ್ ಅವರಿಗೆ ಒರದಿ ಒಂದನ್ನು ನೀಡಿತ್ತು. ಆಫಘಾನಿಸ್ತಾನಕ್ಕೆ ಬರಾಕ್ ಒಬಾಮಾ ಅವರ ಈ ರಹಸ್ಯ ಭೇಟಿಯು ಖಂಡಿತವಾಗಿಯೂ ವ್ಲಾಡಿಮಿರ್ ಪುಟಿನ್ ಅವರ ನಿದ್ದೆಗೆಡಿಸಿದ್ದ ಇರಲಾರದು! ಅಫಘಾನಿಸ್ತಾನಕ್ಕೆ ಬರಾಕ್ ಒಬಾಮಾ ಅವರು ರಹಸ್ಯವಾಗಿ ಭೇಟಿ ನೀಡಿ ಸದಿಲ್ಲದೆ ಮರಳಿ ಅಮೆರಿಕಕ್ಕೆ ಹೋದ ಒಂದು ತಿಂಗಳ ನಂತರ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಗುಹೆಯೊಳಗಿನ ವಿಮಾನವನ್ನು ನೋಡಲು ಅಫಘಾನಿಸ್ತಾನಕ್ಕೆ ಗೌಪ್ಯವಾಗಿ ಭೇಟಿ ನೀಡುತ್ತಾರೆ ಹಾಗೂ ಆ ಸಮಯದಲ್ಲಿ ಭಾರತಕ್ಕೆ ಬಂದ ಪ್ರಾನ್ಸ್ ದೇಶದ ರಾಷ್ಟ್ರಪತಿ ನಿಕೋಲಸ್ ಸರ್ಕೋಜಿ ಅವರು ಮರುಳಿ ಫ್ರಾನ್ಸಿಗೆ ಹೋಗುವ ಬದಲು ಏಕಾಏಕಿ ಅಪಘಾನಿಸ್ತಾನಕ್ಕೆ ದೌಡಾಯಿಸಿದರು. ಇದಾದ ನಾಲ್ಕು ದಿನಗಳ ನಂತರ ಜರ್ಮನಿಯ ಚಾನ್ಸಲರ್ ಎಂಜಲಾ ಮಾರ್ಕೆಲ್ ಅವರು ಎದ್ದು ಬಿದ್ದು ಅಫ್ಘಾನಿಸ್ತಾನಕ್ಕೆ ಓಡಿಹೋಗಿದ್ದರು. ಈ ಎಲ್ಲ ವಿದ್ಯಮನಗಳ ಕುರಿತು ಪಕ್ಕದ ರಾಷ್ಟ್ರ ರಷ್ಯಾದ ಕೆಜಿಬಿ ಕುತೂಹಲದಿಂದ ತನಿಖೆ ನಡೆಸುತ್ತಿತ್ತು ಹಾಗೂ ಗುಹೆಯೊಳಗೆ 5 ಸಾವಿರ ವರ್ಷಗಳ ಹಿಂದಿನ ಭಾರತದ ವಿಮಾನವಿದೆ ಹಾಗೂ ಅಮೆರಿಕಾ ಆ ವಿಮಾನದ ಕುರಿತು ಸಂಶೋಧನೆಗಳನ್ನು ನಡೆಸುತ್ತಿದ್ದೆ ಎಂಬುದು ತನಿಖೆಯಿಂದ ರಷ್ಯಾಗೆ ತಿಳಿದಿದ್ದರೂ ಕೂಡ ಹೊರ ಜಗತ್ತಿಗೆ ಅಪಘಾನಿಸ್ತಾನದ ಗುಹೆಯೊಳಗೆ ಪ್ರಾಚೀನ ಭಾರತದ ವಿಮಾನವೊಂದು ಅಮೆರಿಕ ಮಿಲಿಟರಿಗೆ ಸಿಕ್ಕಿದೆ ಎಂಬುದು ಗೊತ್ತೇ ಆಗಿರಲಿಲ್ಲ. ಆದರೆ ಏಕಾಏಕಿ ಅಮೆರಿಕಾದ ವೆಬ್ಸೈಟ್ ಒಂದು ಅಪಘಾನಿಸ್ತಾನದ ನಿರ್ಜನ ಪ್ರದೇಶದಲ್ಲಿದ್ದ ಗುಹೆಯೊಳಗೆ ಸಿಕ್ಕ ಪ್ರಾಚೀನ ಕಾಲದ ಭಾರತದ ವಿಮಾನದ ಕುರಿತು ವರದಿ ಒಂದನ್ನು ಮಾಡಿದಾಗ ಇಡೀ ಜಗತ್ತಿಗೆ ಜಗತ್ತೇ ವಿಸ್ಮಯಗೊಂಡಿತ್ತು ಹಾಗೂ ಇದು ಇಡೀ ಮನುಕುಲದ ಆಸಕ್ತಿ ಕೆರಳಿಸಿತ್ತು. ಅಮೆರಿಕಾದ ಮಿಲಿಟರಿಯು ಗುಹೆಯಲ್ಲಿರುವ ವಿಮಾನವನ್ನು ಹೊರಗಡೆ ತಂದು ಸಂಶೋಧನೆ ಮಾಡುವುದಕ್ಕೋಸ್ಕರ ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವ ಸಕಲ ಪ್ರಯತ್ನಗಳನ್ನು ಮಾಡಿತು. ಆದರೆ ಅದು ಸಾಧ್ಯವಾಗದ ಮಾತು ಎಂದು ಅರ್ಥವಾದ ಮೇಲೆ ಗುಹೆ ಒಳಗೆ ಇರುವ ವಿಮಾನವನ್ನು ಹೊರತರುವ ಸಕಲ ಪ್ರಯತ್ನಗಳನ್ನು ಸಂಪೂರ್ಣವಾಗಿ ಕೈಬಿಟ್ಟಿತು. ಇಷ್ಟೆಲ್ಲಾ ಆಗುವ ಹೊತ್ತಿಗೆ ಅಮೆರಿಕಾದ ಎಂಟು ಮಿಲಿಟರಿ ಸೈನಿಕರು ನಿಗೂಢವಾಗಿ ಅದೃಶ್ಯರಾಗಿ ಹೋಗಿದ್ದರು!
ಇಂಥದ್ದೇ ಒಂದು ವಿಮಾನ ತಮಿಳುನಾಡಿನ ಶ್ರೀರಂಗಂ ಸ್ವಾಮಿ ದೇವಸ್ಥಾನದ ಭೂಗತ ಕೊಠಡಿ ಒಳಗೆ ಇದೆ ಎಂದು ಹೇಳಲಾಗುತ್ತಿದೆ! ದೇವಸ್ತಾನದ ಕುರಿತಾದ ಇತಿಹಾಸದಲ್ಲಿ ಹಾಗೂ ಪುರಾಣಗಳಲ್ಲಿ ವಿಮಾನಗಳ ಕುರಿತು ಲಿಖಿತ ದಾಖಲೆಗಳಿವೆ. ಅಷ್ಟೇ ಏಕೆ ದೇವಸ್ಥಾನದ ವಾಸ್ತುಶಿಲ್ಪದಲ್ಲಿ ಹಲವು ಬೇರೆ ಬೇರೆ ರೀತಿಯ ವಿಮಾನಗಳ ಚಿತ್ರಗಳನ್ನು ಕೆತ್ತಲಾಗಿದೆ. 2015 ರಲ್ಲಿ ದೇವಸ್ಥಾನದ ನವೀಕರಣ ನಡೆಯುತ್ತಿರುವ ಸಮಯದಲ್ಲಿ ಯಾವತ್ತೂ ತೆರೆಯದ ಮಂದಿರದ ಭೂಗತ ಕೊಠಡಿಯೊಂದನ್ನು ಆಕಸ್ಮಿಕವಾಗಿ ತೆರೆಯಲಾಗುತ್ತದೆ ಹಾಗೂ ಆ ಕೊಠಡಿಯ ಬಾಗಿಲನ್ನು ತೆರೆಯುತ್ತಿದ್ದಂತೆ ಅಲ್ಲಿರುವ ಅಪಾರ ಸಂಪತ್ತು ಹಾಗೂ ವಿಮಾನದ ಆಕಾರದಲ್ಲಿ ಇರುವ ವಸ್ತುವೊಂದನ್ನು ನೋಡು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮೂಕ ವಿಸ್ಮಯವಾಗಿ ಬಿಡುತ್ತಾರೆ. ದೇವಸ್ತಾನದ ನವೀಕರಣ ಕಾಮಗಾರಿ ಕೂಡಲೇ ನಿಲ್ಲಿಸಿ ಈ ವಿಮಾನದ ಆಕಾರದಲ್ಲಿ ಇರುವ ವಸ್ತುವಿನ ಕುರಿತು ದೇವಸ್ತಾನದ ಆಡಳಿತ ಮಂಡಳಿಯ ಸರ್ಕಾರಕ್ಕೆ ವಿಷಯ ತಿಳಿಸುತ್ತದೆ. ಇದರ ಕುರಿತು ಮೂರ್ನಾಲ್ಕು ದಿನಗಳ ಒಳಗೆ ಕ್ಷಿಪ್ರ ತನಿಖೆ ನಡೆಸಲಾಗುತ್ತದೆ ಹಾಗೂ ಅಲ್ಲಿರುವ ಆಭರಣಗಳನ್ನು ಹಾಗೂ ವಿಮಾನದ ಕುರಿತು ಏನಾದರೂ ಸಂಶೋಧನೆ ನಡೆಸಲು ಪ್ರಯತ್ನಿಸಿದರೆ ದೇಶಕ್ಕೆ ಅಪಾಯವಿದೆ ಎಂದು ತಿಳಿದು ಬಂದದ್ದರಿಂದ ಆ ಭೂಗತ ಕೊಠಡಿಯ ಬಾಗಿಲನ್ನು ಶಾಶ್ವತವಾಗಿ ಮುಚ್ಚ ಸೀಲ್ ಮಾಡಲಾಗುತ್ತದೆ. ಭರದ್ವಾಜ ಋಷಿಮುನಿಗಳು ಬರೆದಿರುವ ವಿಮಾನ ಶಾಸ್ತ್ರದದಲ್ಲಿರುವ ಹಲವು ವಿಮಾನಗಳನ್ನು ಗೋಪುರದಲ್ಲಿ ಕೆತ್ತಲಾಗಿದೆ ಹಾಗೂ ಶ್ರೀರಂಗಮ್ ದೇವಸ್ಥಾನದ ಎಲ್ಲ ಗೋಪುರಗಳು ವಿಮಾನಗಳನ್ನೇ ಹೋಲುತ್ತವೆ. ಎಲ್ಲ ಗೋಪುರಗಳ ಮದ್ಯೆ ಒಂದು ಚಿನ್ನದಿಂದ ಮಾಡಿದ ಗೋಪುರ ಉಂಟು. ಈ ಗೋಪುರದ ಹೆಚ್ಚಿನ ಭಾಗ ಭೂಮಿಯಲ್ಲಿ ಹುಗಿದು ಹೋಗಿದ್ದು ಕೇವಲ ಮೇಲ್ಭಾಗ ಕಾಣಿಸುತ್ತದೆ. ಇದನ್ನು ರಂಗ ವಿಮಾನ ಎಂದೇ ಕರೆಯಲಾಗುತ್ತದೆ ಹಾಗೂ ಇದನ್ನು ವಿಷ್ಣು ಭೂಲೋಕ ಸಂಚಾರಕ್ಕಾಗಿ ಉಪಯೋಗ ಮಾಡುತ್ತಿದ್ದ ಎಂದು ಪುರಾಣಗಳು ಹೇಳುತ್ತವೆ. ಇದರಿಂದ ದೇವರುಗಳು ಬ್ರಹ್ಮಾಂಡದಲ್ಲಿ ಸಂಚರಿಸುವುದಕ್ಕೆ ಹಾರುವ ತಟ್ಟೆಗಳ ಹಾಗೆ ವೈಶಿಷ್ಟ್ಯ ಹೊಂದಿರುವ ಅತ್ಯಾಧುನಿಕ ವಿಮಾನಗಳನ್ನು ಬಳಸುತ್ತಿದ್ದರು ಎಂದು ತಿಳಿದು ಬರುತ್ತದೆ. ಬಹುಶಃ ಇದೇ ಕಾರಣಕ್ಕೆ ನಮ್ಮ ಪೂರ್ವಜರು ದೇವರು ಆಕಾಶದಿಂದ ಬರುತ್ತಾನೆ ಎಂದು ಆಕಾಶದ ಕಡೆಗೆ ಕೈ ಮಾಡಿ ತೋರಿಸುತ್ತಿದ್ದರು!
ಋಗ್ವದದಲ್ಲಿ ಬೇರೆ ಬೇರೆ ರೀತಿಯ ವಿಮಾನಗಳ ಕುರಿತು ಉಲ್ಲೇಖ ಇರುವುದರಿಂದ ವಿಮಾನಗಳ ಅಸ್ತಿತ್ವವು ಯುಗಾಂತರಗಳಿಂದ ಇದೆ ಹಾಗೂ ಇಂತಹ ವಿಮಾನಗಳ ವೈಮಾನಿಕ ತಂತ್ರಜ್ಞಾನವು ಯುಗಗಳಿಗೆ ಅನುಸಾರವಾಗಿ ಬದಲಾವಣೆ ಆಗುತ್ತ ಆಗುತ್ತಾ ಕೃತಯುಗ, ತ್ರೇತಾಯುಗ ಹಾಗೂ ದ್ವಾಪರಯುಗದಲಿದ್ದ ಮಾಂತ್ರಿಕ ಮತ್ತು ತಾಂತ್ರಿಕ ಶಕ್ತಿ ಆಧಾರಿತ ವೈಮಾನಿಕ ತಂತ್ರಜ್ಞಾನದಿಂದ ಕಲಿಯುಗದ ಕೃತಕ ವೈಮಾನಿಕ ತಂತ್ರಜ್ಞಾನಕ್ಕೆ ಇವತ್ತು ನಾವು ತಲುಪಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಕೃತಯುಗ, ತ್ರೇತಾಯುಗ ಹಾಗೂ ದ್ವಾಪರಯುಗದ ಒಂದು ಕಾಲಘಟ್ಟದಲ್ಲಿ ಮಂತ್ರ ಹಾಗೂ ತಂತ್ರ ಶಕ್ತಿಯ ಜ್ಞಾನ ಇದ್ದದ್ದರಿಂದ ಮಂತ್ರ ಮತ್ತು ತಂತ್ರಗಳ ಮೂಲಕ ದೇಹದಲ್ಲಿ ಬಿಡುಗಡೆಯಾಗುವ ಜೈವಿಕ ಶಕ್ತಿಯನ್ನೇ ವಿಮಾನಗಳಿಗೆ ಇಂಧನವನ್ನಾಗಿ ಉಪಯೋಗಿಸಿ ಬಿಡುತ್ತಿದ್ದರು ಹೀಗಾಗಿ ಪ್ರಾಚೀನ ಭಾರತದಲ್ಲಿದ್ದ ವಿಮಾನಗಳಿಗೆ ಯಾವುದೇ ಬಾಹ್ಯ ಇಂಧನದ ಅವಶ್ಯಕತೆ ಬೇಕಾಗುತ್ತಿರಲಿಲ್ಲ! ಕೇವಲ ಪ್ರಜ್ಞೆ ಮೂಲಕ ವಿಮಾನವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಮನಸ್ಸಿನ ಆಲೋಚನೆಗಳಿಗೆ ಅನುಗುಣವಾಗಿ ಹಾರಾಟ ನಡೆಸಿ ಡೆಸ್ಟಿನೇಷನ್ ತಲುಪಿ ಬಿಡುತ್ತಿದ್ದರು. ಪ್ರಾಚೀನ ಭಾರತದ ಇಂತಹ ಮೋಸ್ಟ್ ಅಡ್ವಾನ್ಸ್ಡ್ ವಿಮಾನಗಳಿಂದ ಕೇವಲ ಭೂಮಿಯ ಮೇಲೆ ಅಷ್ಟೇ ಅಲ್ಲ ಅಂತರತಾರಾ ಪ್ರಯಾಣ ಮಾಡಿ ಬ್ರಹ್ಮಾಂಡದ ಯಾವುದೇ ಗ್ರಹವನ್ನು ಮನೋವೇಗದಲ್ಲಿ ತಲುಪಲು ಸಾಧ್ಯವಾಗುತ್ತಿತ್ತು. ಅನ್ಯ ಗ್ರಹ ಜೀವಿಗಳು ಹಾರುವ ತಟ್ಟೆಗಳ ಮೂಲಕ ಭೂಮಿಗೆ ಬರುತ್ತವೆ ಎಂಬ ಸುದ್ದಿಗಳು ಅನಾದಿ ಕಾಲದಿಂದಲೂ ಕೇಳಿಬರುತ್ತಿವೆ. ಹಾರುವ ತಟ್ಟೆಗಳ (identified flying objects) ಕುರಿತಾದ ಸುದ್ದಿಗಳು ಆಗಾಗ್ಗೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುತ್ತವೆ ಹಾಗೂ ಪ್ರತಿ ವರ್ಷ ಜಗತ್ತಿನ ಬೇರೆ ಬೇರೆ ಪ್ರದೇಶಗಳಲ್ಲಿ ಹಾರುವ ತಟ್ಟೆಗಳನ್ನು (UFO) ನೋಡಿರವ ಕುರಿತು ಹಲವಾರು ಪ್ರತ್ಯಕ್ಷ ಸಾಕ್ಷಿಗಳು ವರದಿ ಆಗುತ್ತಿರುತ್ತವೆ. ಈ ಹಾರುವ ತಟ್ಟೆಗಳುನ್ನು ಇವತ್ತಿನ ಯಾವುದೇ ಅತ್ಯಾಧುನಿಕ ವಿಮಾನದಿಂದ ಬೆನ್ನಟ್ಟಲು ಸಾದ್ಯವಾಗುತ್ತಿಲ್ಲ ಹಾಗೂ ರಷ್ಯಾ ಅಭಿವೃದ್ಧಿಪಡಿಸಿದ ಜಗತ್ತಿನ ಈಗಿನ ಮೋಸ್ಟ್ ಅಡ್ವಾನ್ಸ್ಡ್ ಏರ್ ಡಿಫೆನ್ಸ್ ಸಿಸ್ಟಮ್ S-400 ಮೂಲಕ ಕೂಡಾ ಈ ಹಾರುವ ತಟ್ಟೆಗಳ ಮೇಲೆ ಕಣ್ಣಿಡಲು ಸಾಧ್ಯವೇ ಆಗುತ್ತಿಲ್ಲ ಎಂಬುದನ್ನು ಅನೇಕ ಮಹಾನ್ ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ ಹಾಗೂ ಹಾರುವ ತಟ್ಟೆಗಳು ಆಕಸ್ಮಿಕವಾಗಿ ಕಣ್ಣಿಗೆ ಬಿದ್ದಾಗ ಹಿಂಬಾಲಿಸಲು ಪ್ರಯತ್ನಿಸಿದಾಗ ಏಕಾಏಕಿ ಅವು ಅದೃಶ್ಯವಾಗಿ ಬಿಡುತ್ತವೆ ಎಂದು ಬೇರೆ ಬೇರೆ ದೇಶದ ಮಿಲಿಟರಿ ಪೈಲಟ್ಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಈ ಹಾರುವ ತಟ್ಟೆಗಳಿಗೆ ಯಾವುದೇ ಬಾಹ್ಯ ಇಂಧನದ ಅವಶ್ಯಕತೆ ಇರುವುದಿಲ್ಲ ಹಾಗೂ ಇವು ಕೇವಲ ಅನ್ಯ ಗ್ರಹ ಜೀವಿಗಳ ಮನಸಿನ ಆಲೋಚನೆಗಗಳಿಗೆ ಅನುಗುಣವಾಗಿ ಹಾರಾಟ ನಡೆಸುತ್ತವೆ. Alien spaceships are controlled by mind and thoughts ಎಂಬುದನ್ನು ಲಾರೆನ್ಸ್ ಆರ್ ಸ್ಪೆನ್ಸರ್ ಎಂಬ ಅಮೇರಿಕಾದ ಲೇಖಕನು 2008 ರಲ್ಲಿ ಬಿಡುಗಡೆ ಮಾಡಿದ ತನ್ನ “ಏಲಿಯನ್ ಇಂಟರ್ವ್ಯೂ” ಎಂಬ ಪುಸ್ತಕದಲ್ಲಿ ಸವಿಸ್ತಾರವಾಗಿ ಬರೆದಿದ್ದಾನೆ. ಇಂತಹ ಹಾರುವ ತಟ್ಟೆಗಳಲ್ಲಿ ಏನೆಲ್ಲಾ ವೈಶಿಷ್ಟತೆಗಳು ಇವೆಯೋ ಆ ಎಲ್ಲ ವೈಶಿಷ್ಟತೆಗಳು ನಮ್ಮ ಭಾರತದ ಪ್ರಾಚೀನ ವಿಮಾನಗಳಲ್ಲಿ ಇದ್ದವು! ಆದರೆ ಕಲಿಯುಗದಲ್ಲಿ ಮಂತ್ರ ಮತ್ತು ತಂತ್ರ ಶಕ್ತಿಗಳು ಕ್ಷೀಣಿಸುತ್ತಾ ಹೋಗಿ ಹೆಚ್ಚು ಕಡಿಮೆ ಸಂಪೂರ್ಣ ಕಣ್ಮರೆ ಆದದ್ದರಿಂದ ದೇಹದಲ್ಲಿ ನಡೆಯುವ ಜೈವಿಕ ರಾಸಾಯನಿಕ ಕ್ರಿಯೆ ಮೂಲಕ ಬಿಡುಗಡೆ ಆಗುವ ಜೈವಿಕ ಶಕ್ತಿಯನ್ನು ವಿಮಾನಗಳಿಗೆ ಇವತ್ತು ಇಂಧನವನ್ನಾಗಿ ಉಪಯೋಗಿಸಲು ಸಾಧ್ಯವಾಗದ ಕಾರಣಕ್ಕೆ ಸೀಮೆ ಎಣ್ಣೆಯನ್ನು ಇಂಧನವನ್ನಗಿ ತುಂಬಿಸಿಕೊಂಡ ವಿಮಾನ ಹಾರಾಟ ನಡೆಸುತಿದ್ದೇವೆ. ಇವತ್ತು ನಮ್ಮಗೆ ಗುರುತ್ವ ವಿರೋಧಿ ತಂತ್ರಜ್ಞಾನವೂ ಕೂಡ ಗೊತ್ತಿಲ್ಲದೆ ಇರುವುದರಿಂದಾಗಿ ಗುರುತ್ವ ವಿರೋಧಿ (anti gravity) ತತ್ವದ ಮೇಲೆ ಹಾರಾಟ ಮಾಡುವ ವಿಮಾನವನ್ನು ಕೂಡ ನಮ್ಮಿಂದ ತಯಾರು ಮಾಡಲು ಸಾಧ್ಯವಿಲ್ಲ. ಬೆಂಕಿ ಮತ್ತು ನೀರಿನಿಂದ, ಪಾವನ ಶಕ್ತಿ ಆಧಾರಿತ ಹಾಗೂ ವಿದ್ಯುತ್ ಶಕ್ತಿ ಆಧಾರಿತ ವಿಮಾನಗಳು ಕೂಡಾ ಪ್ರಾಚೀನ ಭಾರತದಲ್ಲಿ ಇದ್ದವು ಎಂಬುದಕ್ಕೆ ಋಗ್ವೇದದ ಶ್ಲೋಕಗಳಲ್ಲಿ ಆಧಾರವಿದೆ. ಹೀಗಾಗಿ ಇವತ್ತಿನ ಯಾವುದೇ ವಿಮಾನವು ಕೂಡ ಅತ್ಯಂತ ಕಳಪೆ ತಂತ್ರಜ್ಞಾನ ಹೊಂದಿದ ವಿಮಾನವೆಂದು ಪರಿಗಣಿಸಿದರೂ ತಪ್ಪಾಗುವುದಿಲ್ಲ. ಪ್ರಾಚೀನ ಭಾರತದಲ್ಲಿ ಅತ್ಯಂತ ವೈಶಿಷ್ಟ್ಯಗಳನ್ನು ಹೊಂದಿದೆ ವಿಮಾನಗಳು ಇದ್ದವು ಎಂಬುದು ಋಗ್ವೇದದ ಶ್ಲೋಕಗಳಿಂದ ಆಯ್ದ ಭಾರದ್ವಾಜ ಮಹಾಋಷಿಗಳಿಂದ ರಚಿತವಾದ ವಿಮಾನಿಕ ಶಾಸ್ತ್ರದಿಂದ ತಿಳಿದುಬರುತ್ತದೆ.
ಭಾರದ್ವಾಜ ಮಹರ್ಷಿಗಳಿಂದ ರಚಿತವಾದ ವೈಮಾನಿಕ ಶಾಸ್ತ್ರದ ಆಯ್ದ ಕೆಲವು ಶ್ಲೋಕಗಳು ಹಾಗೂ ಅದರ ಅರ್ಥ.
Shloka 1
अथ विमानस्वरूपमाह
वायुप्रेरिते समारेच्यमण्डले
पृथक्पृथक्स्तम्भशुद्धिबन्धः |
मणिबन्धेक्षुबन्धे
तु नानाकुण्डलक्रमसहितः ||
ವಿಮಾನದ ಸ್ವರೂಪವನ್ನು ವಿವರಿಸುತ್ತೇನೆ:
ವಾಯು ಪ್ರೇರಿತವಾದ ಸಮಾರಚ್ಯಮಂಡಲದಲ್ಲಿ
ಪ್ರತ್ಯೇಕ ಪ್ರತ್ಯೇಕ ಕಂಬಗಳ ಶುದ್ಧಿ ಮತ್ತು ಬಂಧನ;
ಮಣಿಬಂಧ ಮತ್ತು ಇಕ್ಷುಬಂಧ
ನಾನಾ ಕುಂಡಲ ಕ್ರಮದಿಂದ ಕೂಡಿರುತ್ತದೆ.
Shloka 2
सूत्रस्पर्शशक्तिभिरनुप्रविष्टं
मुद्गराघातकृतं मनोहरं |
ज्वालास्फुलिङ्गकमपि प्रज्वाल्य
शकुनपक्षवत्सम्पतते |
ಸೂತ್ರ ಸ್ಪರ್ಶದ ಶಕ್ತಿಯಿಂದ ಪ್ರವೇಶಿಸಿದ,
ಗದೆಯ ಆಘಾತದಿಂದ ಸುಂದರವಾದ,
ಜ್ವಾಲೆಯ ಕಣಗಳು ಕೂಡ ಉರಿಯುತ್ತಿವೆ,
ಹಕ್ಕಿಯ ರೆಕ್ಕೆಗಳಂತೆ ಹಾರುತ್ತಿದೆ.

Shloka 3 वायुप्रेरणबलवृद्धिरित्याह
तद्विमानं पंचवायुभिस्तिष्ठति |
पूर्वपद्मासनं चाक्रमाग्निस्थलसंज्ञकम् | ವಾಯು ಪ್ರೇರಣಾ ಬಲ ವೃದ್ಧಿಯನ್ನು ಹೇಳಿದೆ,
ಆ ವಿಮಾನವು ಐದು ವಾಯುಗಳಿಂದ ನಿಲ್ಲುತ್ತದೆ,
ಪೂರ್ವದ ಪದ್ಮಾಸನ ಮತ್ತು ಚಕ್ರದ ಅಗ್ನಿಸ್ಥಲ ಎಂಬ ಹೆಸರುಗಳನ್ನು ಹೊಂದಿದೆ.
Shloka 4
अष्टौ आत्मबाणाः सपञ्चमहाशक्तयः |
बाहुशब्दैः समाक्रम्य तिष्ठन्ति |
ಎಂಟು ಆತ್ಮಾಬಾಣಗಳು ಹಲವು ಮಹಾಶಕ್ತಿಗಳೊಡನೆ ಬಾಹುಗಳ ಶಬ್ದಗಳ ಮೂಲಕ ಸೇರಿಕೊಂಡು ನಿಲ್ಲುತ್ತವೆ.
Shloka 5 मणिसम्पुटकोणान्तः प्रतिश्रुतिसम्पुटं |
रुक्मसम्बद्धविमानं निर्भिद्याग्रदर्शन ಮಣಿ ಸಂಪುಟದ ಕೋನಗಳ ಅಂತಃಸಮೀಪದಲ್ಲಿ ಪ್ರತಿಜ್ಞೆಗಳ ಸಂಪುಟ,
ಚಿನ್ನದ ಕೂಲ್ಗಳಿಂದ ಕಟ್ಟಲ್ಪಟ್ಟ ವಿಮಾನ, ಮುಂದಿನ ದೃಶ್ಯದಲ್ಲಿ ಮುಚ್ಚಲ್ಪಟ್ಟಿದೆ.
Shloka 6 वायुगुणानामित्याह
वायवो यत्र पंचवायवस्तत्र |
कफं पित्तमपि समाहितानि भवन्ति || ವಾಯು ಗುಣಗಳ ಬಗ್ಗೆ ಹೇಳಿದೆ,
ಯಾವ ಸ್ಥಳದಲ್ಲಿ ಪಂಚವಾಯುಗಳು ಇರುತ್ತವೆಯೋ ಅಲ್ಲಿ,
ಕಫ ಮತ್ತು ಪಿತ್ತಗಳೂ ಸಮಾಹಿತವಾಗಿರುತ್ತವೆ.
Shloka 7 वायुसंवेदनमित्याह
वायवः पृथक्पृथग्विमानं संचारयन्ति |
तेषां गतीनामेकैकशः संप्रवेशनं भवन्ति ||
ವಾಯು ಸಂವೇದನೆ ಹೇಳಿದೆ. ವಾಯುಗಳು ವಿವಿಧ ವಿಮಾನಗಳನ್ನು ಹಾರಿಸುತ್ತವೆ. ಅವುಗಳ ಪ್ರತಿಯೊಂದು ಗತಿಯೂ ಪ್ರವೇಶದಿಂದಲೂ ನಿರ್ಧಾರವಾಗಿದೆ.

Shloka 8 अशनिमणिगुणनं चक्रं यथाक्रमं |
वह्नितेजस्विनां बन्धः स्यादित्याह ||
ಬೆಳಕಿನ ಮಣಿಯಂತೆ, ಬೆಳಕಿನ ಶಕ್ತಿಯನ್ನು ಹೊಂದಿರುವ ವಿಮಾನದ ಚಕ್ರದಂತಹ ಕೇಂದ್ರವು ಕ್ರಮಕ್ರಮವಾಗಿ ಅಗ್ನಿಯ ಜ್ವಾಲೆಯ ಬಂಧದಿಂದ ಕೂಡಿದೆ
Shloka 9
वातप्रवेशनबलं तु पंचविधं |
तस्मिन्नुक्ते शास्त्रेषु यथास्वपद्मम् ||
ಬೆಳಗಿದ ವಿಮಾನ, ಉತ್ತೇಜನ ಪಡೆದಿದ್ದರೂ ಬೆಳಗಿನ ಶಕ್ತಿಯನ್ನು ಹೊಂದಿದ್ದು, ಅಲ್ಲಿ ಆಂತರಿಕ ಚಲನೆ ನಡೆಯುತ್ತದೆ.
Shloka 10
सन्तप्तविमानं सुतेजस्कृतं |
अष्टावायुबलं यत्र संचारणम् ||
ವಾಯು ಪ್ರವೇಶನದ ಬಲವು ಐದು ವಿಧವಾಗಿದೆ. ಆ ಸಂದರ್ಭದಲ್ಲಿ ಶಾಸ್ತ್ರಗಳಲ್ಲಿ ಹೇಗೆ ಸ್ಥಳಾಂತರ ವಾಯು ಬಳಸಲಾಗುತ್ತದೆ ಎಂದು ಹೇಳಲಾಗಿದೆ.
Shloka 11
ಅಲ್ಲಿ ವಾಯುವಿನ ಸಂಚರಣೆ ಇರುತ್ತದೆ, ಮಣಿಯ ಬಂಧದಲ್ಲಿ, ಅಲ್ಲಿ ವಾಯುವಿನ ಗುಣವನ್ನು ಅರಿಯಲಾಗುತ್ತದೆ.
Shloka 12
ವಾಯುವಿನ ಹೊಡೆತದ ಮೂಲಕ ಬಲವು ವಿಮಾನದಲ್ಲಿ ಸಂಚರಿಸುತ್ತದೆ, ಅನಂತರ ಅಲ್ಲಿ ಸಂಚಾರ ಅರಿವಿಗೆ ಬರುತ್ತದೆ.
Shloka 13
ವಿಮಾನವು ವಾಯು ದ್ವಾರಗಳ ಮೂಲಕ ವಾಯು ಹೊಡೆತದ ಮೂಲಕ ಗಾಳಿ ಹೊರಸೂಸುವುದು, ಅಲ್ಲಿ ಅಗ್ನಿ ಬೆಳಗುವುದು ಅರಿವಿಗೆ ಬರುತ್ತದೆ.
Shloka 14
ಇಪ್ಪತ್ತೈದು ಬಗೆಯ ವಿಮಾನಗಳನ್ನು ವರ್ಣಿಸಲಾಗಿದೆ: ಕೀಟ ವಿಮಾನ, ಜ್ಯೋತಿರ್ಮುಖ ವಿಮಾನ, ಶಕ್ರವತ್ ವಿಮಾನ, ಸೂಕರಮುಖ ವಿಮಾನ, ಪಟಪತ್ರ ವಿಮಾನ, ಇತ್ಯಾದಿ.
Shloka 15
ಮತ್ತೊಂದು ಉಪಕರಣವು ಸೌರ ಕಿರಣಗಳನ್ನು ಆಕರ್ಷಿಸಿ ಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ಅದು ಸೂರ್ಯನ ಸೇರಿದಂತೆ ಇಪ್ಪತ್ತೈದು ವಿಭಿನ್ನ ಮೂಲಗಳಿಂದ ಶಕ್ತಿಯನ್ನು ಸೆಳೆಯುತ್ತದೆ.
Shloka 16
ಬುದ್ಧಿವಂತರ ಪ್ರಯತ್ನದ ಮೂಲಕ ಶಕ್ತಿಯು ಸಮರ್ಪಣೆಯಾಗಿರುವಾಗ, ವಿಮಾನವು ಸರಿಯಾಗಿ ಸಂಚರಿಸುತ್ತದೆ ಮತ್ತು ಎಲ್ಲ ಉದ್ದೇಶಗಳಿಗೆ ಉಪಯುಕ್ತವಾಗುತ್ತದೆ.
Shloka 17
ದಿವ್ಯ ಶಕ್ತಿಯಿಂದ ಶಕ್ತಗೊಳಗಾದ ಪ್ರಯಾಣಿಕನಾದ್ದರಿಂದ, ವಿಮಾನದಲ್ಲಿ ಪ್ರಯಾಣಿಸುವವನು ಎಲ್ಲಾ ಲೋಕಗಳಿಗೆ ಪ್ರಯಾಣಿಸುತ್ತಾನೆ ಮತ್ತು ಸುಖ-ಸಂಪತ್ತು ಹೊಂದುತ್ತಾನೆ.
(Multi dimension vehicle used to travel beyond bhooloka or earth )
Shloka 18
ಋಗ್ವೇದವು ಮುಖ್ಯವಾಗಿದ್ದು, ಪ್ರಜಾಪತಿ ಪ್ರಧಾನವಾಗಿದ್ದಾನೆ. ಪ್ರಜಾಪತಿಯ ಪ್ರಯತ್ನದಿಂದ ಪೂರ್ಣ ವಿಮಾನವನ್ನು ನಿರ್ವಹಿಸಬಹುದು.
Shloka 19
ವಿಮಾನವು ನೀರಿನಲ್ಲಿಯೂ ಗಾಳಿಯಲ್ಲಿಯೂ ಸಂಚರಿಸುತ್ತಿದ್ದು, ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತದೆ. ಅದರ ಮಧ್ಯದಲ್ಲಿ ವಿದ್ಯುತ್ ಶಕ್ತಿ ಉತ್ಪಾದಿಸುವ ಯಂತ್ರವಿರುತ್ತದೆ.
(Electricity Generator).
Shloka 20
ಮೂರು ಲೋಕಗಳಲ್ಲಿರುವ ಎಲ್ಲಾ ಜೀವಿಗಳು ಒಂದೆಡೆ ಸೇರಿ, ವಿಮಾನದ ಚಲನೆ ಗಗನದಲ್ಲಿ ಸದಾ ಗೋಚರಿಸುತ್ತದೆ.
Shloka 21
ನಕ್ಷತ್ರಮಂಡಲದ ಆವರಣದ ತುದಿಯಲ್ಲಿ, ಈ ಅದ್ಭುತ ಯಂತ್ರವು ನಿಂತಿದೆ. ಭಾಸ್ಕರನೊಂದಿಗೆ ಒಂದಾಗಿರುವ ಈ ವಿಮಾನವು ಸವ್ಯಾಸಾಚಿಯದು.
Shloka 22
ವಿಮಾನದ ಉದ್ದೇಶ ಹಾಗೂ ದೈವೀ ಸಂಕಲ್ಪ: ಸೃಷ್ಟಿಯ ಅನುಕೂಲಕ್ಕಾಗಿ ಹಾಗೂ ಸಕಲ ಜನರಿಗಾಗಿ ಇದು ಮಹಾನ್ ಶಂಕರನಿಂದ ಬಂದಂತಹ ಜ್ಞಾನ.
Shloka 23
ಮಹಾಶಕ್ತಿಯನ್ನು ಹೊಂದಿರುವ ಮತ್ತು ಸುಂದರ ಕಾಣುವ ವಿಮಾನವು ಭೂಮಿಯಲ್ಲಿಯೂ, ನೀರಿನ ಅಂಚಿನಲ್ಲಿ, ಆಕಾಶದಲ್ಲಿಯೂ ಸಂಚರಿಸುತ್ತದೆ.
Shloka 24
ಸೂರ್ಯಕಿರಣಗಳ ಯೋಗದಿಂದ ವಿಮಾನವು ಬೆಳಗುತ್ತದೆ. ಈ ವಿಮಾನವು ಕಾಡುಗಳಲ್ಲಿಯೂ ಬೆಟ್ಟಗಳಲ್ಲಿಯೂ ಸಂಚರಿಸುತ್ತದೆ.
Shloka 25
ಧೂಮಯಾನವು ತನ್ನ ಮಾರ್ಗದಲ್ಲಿ ಅಗ್ನಿಯಿಂದ ಪ್ರಭಾವಿತವಾಗಿದೆ. ಕಾನ್ಟಾರ ಪ್ರದೇಶಗಳಲ್ಲಿ ಸಂಚರಿಸುವ ಈ ವಿಮಾನವು ವಿದ್ಯುತ್ ಶಕ್ತಿಯಿಂದ ಸಂಚರಿಸುತ್ತದೆ. ( Electric Aeroplane concept at that time)
ಹೊಸೂರು ತಾಲೂಕಿನ ತೋಗರೆ ಅಗ್ರಹಾರದಲ್ಲಿ ಕಡುಬಡತನದ ಕೃಷ್ಣ ಶಾಸ್ತ್ರಿ ಹಾಗೂ ಲಕ್ಷ್ಮಮ್ಮ ಎಂಬ ದಂಪತಿ ಇದ್ದರು ಹಾಗೂ ಇವರಿಗೆ 5 ಜನ ಮಕ್ಕಳು ಇದ್ದರು. 1866ರಲ್ಲಿ ಜನಿಸಿದ ಹಿರಿಯ ಪುತ್ರನಿಗೆ ಎಂಟನೇ ವಯಸ್ಸಿನಲ್ಲಿ ಆನೇಕಲ್ಲಿನ ನಂಜಮ್ಮ ಎಂಬ ಹೆಸರಿನ ಚಿಕ್ಕ ಹುಡುಗಿಯ ಜೊತೆಗೆ ಬಾಲ್ಯವಿವಾಹವನ್ನು ಕೂಡಾ ಮಾಡಿ ಮುಗಿಸಿದ್ದರು. ಕಡುಬಡತನ ಇದ್ದದ್ದರಿಂದ ಇಡೀ ಕುಟುಂಬ ಚನ್ನಪಟ್ಟಣಕ್ಕೆ ಹೋಗಿ ನೆಲೆಸಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು ಆದರೆ ಏಕಾಏಕಿ ಕೃಷ್ಣಶಾಸ್ತ್ರಿ ಹಾಗೂ ಲಕ್ಷ್ಮಮ್ಮ ಮೃತರಾಗುತ್ತರೆ. ಇದರಿಂದ 5 ಮಕ್ಕಳಿಗೆ ಬರಬಾರದ ಕಷ್ಟ ನಷ್ಟ ನೋವುಗಳು ಬಂದೊದಗುತ್ತವೆ. ಮುಂದೆ ಕೃಷ್ಣಶಾಸ್ತ್ರಿ ಹಾಗೂ ಲಕ್ಷ್ಮಮ್ಮನ ಹಿರಿಯ ಮಗ ಜವಾಬ್ದಾರಿ ತೆಗೆದುಕೊಂಡು ತನ್ನ ತಮ್ಮ ತಂಗಿಯರನ್ನು ಕಷ್ಟ ಪಟ್ಟು ಬಿಕ್ಷೆ ಬೇಡಿ ಸಾಕಿ ಸಲಹುತ್ತಿರುವಾಗ ಏಕಾಏಕಿ ಚಿಕ್ಕ ತಂಗಿಯು ಅಕಾಲಮೃತ್ಯು ಹೊಂದುತ್ತಾಳೆ ಹಾಗೂ ಹಿರಿಯ ಅಣ್ಣನ ಹತ್ತಿರ ಶವ ಸಂಸ್ಕಾರ ಮಾಡಲು ನಯಾಪೈಸೆ ದುಡ್ಡು ಇರುವುದಿಲ್ಲ. ಆಗ ತಂಗಿಯ ಹೆಣದ ಕಾಲಲ್ಲಿ ಇದ್ದ ಗೆಜ್ಜೆ ಬಿಚ್ಚಿ ಮಾರಾಟ ಮಾಡಿ ಬಂದ ದುಡ್ಡಲ್ಲಿ ಶವ ಸಂಸ್ಕಾರ ನಡೆಸಬೇಕಾದ ಅತ್ಯಂತ ನೋವಿನ ಪರಿಸ್ಥಿತಿ ಎದುರಾಗುತ್ತದೆ. ಇದಾದ ಕೆಲವು ದಿನಗಳ ನಂತರ ಹಿರಿಯ ಅಣ್ಣನು ಸಿಡಿಬು ರೋಗಕ್ಕೆ ತುತ್ತಾಗಿ ಸಾವು ಬದುಕಿನೊಂದಿಗೆ ಹೋರಾಡಬೇಕಾಗುತ್ತದೆ. ಸಿಡುಬು ರೋಗನ್ನು ಗುಣಪಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಐಹಿಕ ಜೀವನವನ್ನು ತೊರೆದು ಕೋಲಾರ ಜಿಲ್ಲೆಯ ಅವನಿ ಕಾಡಿಗೆ ಕೃಷ್ಣಶಾಸ್ತ್ರಿ ಹಾಗೂ ಲಕ್ಷ್ಮಮ್ಮನ ಹಿರಿಯ ಮಗ ಹೋಗಬೇಕಾದ ಪರಿಸ್ಥಿತಿ ಒದಗಿ ಬರುತ್ತದೆ. ಕಾಡಿನ ಗುಹೆಯೊಂದರಲ್ಲಿ ಸಿಕ್ಕ ಋಷಿಯೊಬ್ಬರಿಂದ ಸಿಡುಬು ರೋಗವು ವಾಸಿಯಾಗುತ್ತದೆ ಹಾಗೂ ಆ ಋಷಿ ಸಮ್ಮುಖದಲ್ಲಿ ಏಕಚಿತ್ತದಿಂದ ಅನೇಕ ವಿದ್ಯೆಗಳನ್ನು ಕಲಿಯುವ ಮೂಲಕ ಧ್ಯಾನ ಮತ್ತು ಸಮಾಧಿ ಸ್ಥಿತಿಯನ್ನು ತಲುಪು ಬಿಡಬಲ್ಲ ದೊಡ್ಡ ಸಾಧಕನಾಗಿ, ಜ್ಞಾನಿಯಾಗಿ, ಯೋಗಿಯಾಗಿ, ಸಂತನಾಗಿ, ದಿವ್ಯದೃಷ್ಟಿ ಉಳ್ಳವನಾಗಿ ಹೊರಹೊಮ್ಮುತ್ತಾನೆ ಕೃಷ್ಣಶಾಸ್ತ್ರಿ ಹಾಗೂ ಲಕ್ಷ್ಮಮ್ಮ ದಂಪತಿಯ ಹಿರಿಯ ಪುತ್ರ. ನಂತರ ಧ್ಯಾನ ಮತ್ತು ಸಮಾಧಿ ಸ್ಥಿತಿ ತಲುಪಿದಾಗ ಟೆಲಿಪತಿ ವಿದ್ಯೆಯಿಂದ ಮಹಾಋಷಿ ಭಾರದ್ವಾಜ್, ಗೌತಮ ಹಾಗೂ ನಾರದರ ಜೊತೆ ಸಂವಹನ ಏರ್ಪಡುತ್ತದೆ ಅಂತೆ. ಆಗ ವಿಮಾನ ಶಾಸ್ತ್ರದ ಕುರಿತು, ಪಂಚಮಹಾಭೂತಗಳ ರಹಸ್ಯದ ಕುರಿತು ಹಾಗೂ ವಾಟರ್ ಕ್ರಾಫ್ಟ್ಗೆ ಸಂಭಂದ ಪಟ್ಟ ಅನಂತವಾದ ಜ್ಞಾನ ಬಂಡಾರವು ಮೌಖಿಕವಾಗಿ ಕೃಷ್ಣ ಶಾಸ್ತ್ರೀಯ ಹಿರಿಯ ಮಗನ ಸಬ್ಕಾನ್ಸ್ ಮೈಂಡ್ ಒಳಗೆ ಸಂಸ್ಕೃತ ಶ್ಲೋಕಗಳ ರೂಪದಲ್ಲಿ ರೆಕಾರ್ಡ್ ಆಗಿಬಿಡುತ್ತದೆ. ಹೀಗೆ ತಪಸ್ಸಿನ ಮೂಲಕ ನಿಗೂಢ ಜ್ಞಾನ ಪ್ರಾಪ್ತಿಯಾದ ನಂತರ ಕೋಲಾರದ ಕಾಡಿನಿಂದ ಹೊರಬಿದ್ದು ಹಿಂಡತಿಯ ಊರಾದ ಆನೇಕಲ್ಗೆ ಹೋಗಿ 25 ವರ್ಷಗಳ ಕಾಲ ನೆಲೆಸಿದ ಕೃಷ್ಣಶಾಸ್ತ್ರಿ ಹಾಗೂ ಲಕ್ಷ್ಮಮ್ಮನ ಹಿರಿಯ ಪುತ್ರನು ಧ್ಯಾನದಲ್ಲಿ ಕುಳಿತು ವಿಮಾನ ಶಾಸ್ತ್ರದ ಕುರಿತು ಅನೇಕ ಶ್ಲೋಕಗಳನ್ನು ಪಠಣ ಮಾಡುತಿದ್ದರು ಹಾಗೂ ಅವರ ಆಪ್ತರಾದ ವೆಂಕಟಾಚಲ ಎಂಬುವವರು ಆ ಎಲ್ಲ ಶ್ಲೋಕಗಳನ್ನು ಬರೆದುಕೊಳ್ಳುತ್ತಿದ್ದರು ಮತ್ತು ವಿಮಾನಿನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳನ್ನು ಬಿಡಿಸುತ್ತಿದ್ದರು. ಹೀಗೆ 1918ರಿಂದ 1923ರ ನಡುವೆ ವಿಮಾನ ಶಾಸ್ತ್ರವೆಂಬ ಪೂರ್ಣ ಪುಸ್ತಕ ಒಂದು ತಯಾರು ಆಗಿತ್ತದೆ ಹಾಗೂ ಇದಕ್ಕೆ ಮಹಾಋಷಿ ಭರದ್ವಾಜ್ ವಿರಚಿತ ವೈಮಾನಿಕ ಶಾಸ್ತ್ರ ಎಂದು ತಲೆಬರಹ ಕೊಡಲಾಗುತ್ತದೆ. ಈ ಪುಸ್ತಕದ ಅಸ್ತಿತ್ವವನ್ನು 1952 ರಲ್ಲಿ ಮೈಸೂರಿನ ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಸಂಸ್ಕೃತ ಎಂಬ ಸಂಸ್ಥೆಯಲ್ಲಿ ಇದ್ದ GR ಜೋಸ್ಯರ್ ಎಂಬ ಮೈಸೂರಿನ ಸಂಸ್ಕೃತ ಪಂಡಿತರು ಬಹಿರಂಗಪಡಿಸಿದರು ಹಾಗೂ ವಿಮಾನ ಶಾಸ್ತ್ರ ಎಂಬ ಈ ಮೂಲ ಪುಸ್ತಕವನ್ನು 1973ರಲ್ಲಿ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿ ಬಿಡುಗಡೆ ಮಾಡಿದರು. ಹೀಗೆ ಬರೆಯಲ್ಪಟ್ಟ ವಿಮಾನ ಶಾಸ್ತ್ರ ಪುಸ್ತಕವನ್ನು ಮುಂದೆ 1970ರ ದಶಕದಲ್ಲಿ ಅಮೆರಿಕಾದ ನಾಸಾ ಸಂಸ್ಥೆಯು (ನೇಷನಲ್ ಆಸ್ಟ್ರೋನೊಮಿಕ್ಸ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್) 160 ಡಾಲರ್ ದುಡ್ಡು ಕೊಟ್ಟು ಕೊಂಡು ಇಡೀ ಪುಸ್ತಕವನ್ನು ನಾಸಾ ಸಂಸ್ಥೆಯ ಸಾಲು ಸಾಲು ವಿಜ್ಞಾನಿಗಳು ಆಳವಾಗಿ ಅಧ್ಯಯನ ನಡೆಸಿದರು. ಹೀಗೆ ತಪಸ್ಸಿನ ಮೂಲಕ ಜ್ಞಾನ ಪ್ರಾಪ್ತಿಯನ್ನು ಪಡೆದು ವಿಮಾನ ಶಾಸ್ತ್ರ ಎಂಬ ಪುಸ್ತಕವನ್ನು ಬರೆದ ಕೃಷ್ಣಶಾಸ್ತ್ರಿ ಹಾಗೂ ಲಕ್ಷ್ಮಮ್ಮ ದಂಪತಿಯ ಹಿರಿಯ ಮಗನ ಹೆಸರೇ ಆನೇಕಲ್ ಸುಬ್ಬರಾಯ ಶಾಸ್ತ್ರಿ! ಇದೇ ಸುಬ್ಬರಾಯ ಶಾಸ್ತ್ರೀಯವರ ಹತ್ತಿರ ಸಹಾಯ ಮತ್ತು ಜ್ಞಾನ ಎರಡನ್ನೂ ಪಡೆದುಕೊಂಡು, ರೈಟ್ ಬ್ರದರ್ಸ್ 1903ರಲ್ಲಿ ವಿಮಾನ ಹಾರಾಟ ನಡೆಸುವುದಕ್ಕಿಂತ 8 ವರ್ಷ ಮೊದಲೇ ಶಿವಕರ್ ಬಾಪೂಜಿ ತಲ್ಪಡೆ ಎನ್ನುವವರು 1895 ರಲ್ಲಿ ಮುಂಬೈ ಸಮುದ್ರ ತೀರದದಲ್ಲಿ ಪಾದರಸ ಎಂಜಿನ್ ಹೊಂದಿದ ವಿಮಾನವನ್ನು ತಯಾರು ಮಾಡಿ ಹಾರಾಟ ನಡೆಸಿದ್ದರು. ಆದರೆ ಆವತ್ತಿನ ಬ್ರಿಟೀಷ್ ಸರ್ಕಾರ ಮರುದಿನ ಶಿವಕರ್ ಬಾಪೂಜಿ ತಲ್ಪಡೆ ಅವರನ್ನು ಅರೆಸ್ಟ್ ಮಾಡಿ ಜೈಲಿಗೆ ತಳ್ಳಿತು. ಈ ಎಲ್ಲ ವಿದ್ಯಮಾನಗಳನ್ನು ಲೋಕಮಾನ್ಯ ತಿಲಕ್ ಬಾಲಗಂಗಾಧರನಾಥ ಅವರ ಕೇಸರಿ ಪತ್ರಿಕೆಯಿಂದ ಹಿಡಿದು ಲಂಡನ್ ನಗರದ ಅನೇಕ ಬೇರೆ ಬೇರೆ ಪತ್ರಿಕೆಗಳು ವರದಿಯನ್ನು ಮಾಡಿದ್ದವು ಅನ್ನುವುದಕ್ಕೆ ಇವತ್ತಿಗೂ ಆಧಾರಗಳು ಕಾಣಸಿಗುತ್ತವೆ. ಆದರೆ ಬ್ರಿಟಿಷರ ಹುನ್ನಾರದಿಂದ ವಿಮಾನ ಕಂಡುಹಿಡಿದ ಕೀರ್ತಿ ರೈಟ್ ಬ್ರದರ್ಸ್ಗೆ ಸಲ್ಲಿದರೂ ಮತ್ತೆ ಇವತ್ತು ಜಗತ್ತು, ರೈಟ್ ಬ್ರದರ್ಸ್ಗಿಂತಲೂ 8 ವರ್ಷ ಮೊದಲು ಭಾರತದಲ್ಲಿ ವಿಮಾನ ಹಾರಾಟ ನಡೆದಿತ್ತು ಹಾಗೂ ಪ್ರಾಚೀನ ಭಾರತೀಯರಿಗೆ ವೈಮಾನಿಕ ಶಾಸ್ತ್ರ ಗೊತ್ತಿತ್ತು ಎನ್ನುವ ಸತ್ಯ ಸಂಗತಿಯನ್ನು ಗುಸುಗುಸು ಮಾತನಾಡಿಕೊಳ್ಳುತ್ತಿದೆ.

ಮಹಾಋಷಿ ಭರದ್ವಾಜ್ ವೈಮಾನಿಕ ಶಾಸ್ತ್ರ
ಈ ವಿಮಾನ ಶಾಸ್ತ್ರ ಪುಸ್ತಕವು ಭರದ್ವಾಜ್ ಋಷಿ ಮುನಿಗಳಿಗೆ ಅರ್ಪಿತವಾಗಿದೆ ಎಂದು ಹೇಳಿ ಸುಬ್ಬರಾಯ ಶಾಸ್ತ್ರಿಗಳು 1940ರಲ್ಲಿ ಕಾಲಮೃತ್ಯುವಿಗೆ ಒಳಗಾದರು. ಸುಬ್ಬರಾಯ ಶಾಸ್ತ್ರಿ ಅವರ “ಮಹಾಋಷಿ ಭರದ್ವಾಜ್ ವಿರಚಿತ ವೈಮಾನಿಕ ಶಾಸ್ತ್ರ” ಪುಸ್ತಕವು ಒಟ್ಟು 3 ಸಾವಿರ ಸ್ಲೋಕಗಳನ್ನು, 500 ಸೂತ್ರಗಳನ್ನು ಹಾಗೂ ಏರೋನಾಟಿಕ್ಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳನ್ನು ಒಳಗೊಂಡಿದೆ. ಈ ಎಲ್ಲ ಶ್ಲೋಕಗಳು, ಸೂತ್ರಗಳು ಮತ್ತು ಏರೋನಾಟಿಕ್ಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಚಿತ್ರಗಳು ಮಹರ್ಷಿ ಭರದ್ವಾಜ್ ರಚಿಸಿರುವ “ಯಂತ್ರ ಸರ್ವಸ್ವ” ಹಾಗೂ “ಧಾತು ಸರ್ವಸ್ವ” ಎಂಬ ಗ್ರಂಥಗಳ ಒಂದು ಸಣ್ಣ ಭಾಗ ಎನ್ನಲಾಗುತ್ತದೆ. ಮಹಾಋಷಿ ಭರದ್ವಾಜರು “ಧಾತು ಸರ್ವಸ್ವ” ಗ್ರಂಥದಲ್ಲಿ ವಿಮಾನಗಳನ್ನು ಸೋಮ, ಸೌಂಡಾಲ್ ಮತ್ತು ಮಾರ್ದ್ವೀಕ ಎಂಬ ಲೋಹಗಳನ್ನು ಕರಗಿಸಿ ಮಿಶ್ರಣ ಮಾಡಿದಾಗ ತಯಾರುಗುವ ರಜಲೋಹ ಎಂಬ ಮಿಶ್ರ ಲೋಹದಿಂದ ತಯಾರಿಸಲಾಗುತ್ತದೆ ಹಾಗೂ ಈ ರಾಜಲೋಹಕ್ಕೆ ಶಾಖನಿರೋಧಕ ಶಕ್ತಿ ಇರುತ್ತದೆ ಎಂದು ವಿವರಿಸುತ್ತಾರೆ. ಈ ರಾಜಲೋದಿಂದ ನಿರ್ಮಾಣವಾದ ವಿಮಾನದ ವಲಯಗಳನ್ನು ಕಾಗೆಬಂಗರ ಎಂಬ ತೆಳುವಾದ ಲೋಹದ ಹಳೆಗಳಿಂದ ಮುಚ್ಚಬೇಕು ಹಾಗೂ ಇದರಿಂದ ಸೌರಶಕ್ತಿಯನ್ನು ಸಂಗ್ರಹಿಸಿ ವಿಮಾನ ಯಾನ ನಡೆಸಲು ಸಾಧ್ಯ ಎಂದು ಮಹರ್ಷಿ ಭರದ್ವಾಜರು ಹೇಳುತ್ತಾರೆ. ಒಟ್ಟು 50 ವಿವಿಧ ಕಾಗೆಬಂಗಾರಗಳ ವರ್ಣನೆಯನ್ನು ಮತ್ತು ಅದರ ಶುದ್ಧೀಕರಣ ವಿಧಾನವನ್ನು “ಧಾತು ಸರ್ವಸ್ವ” ಎಂಬ ಗ್ರಂಥದಲ್ಲಿ ವಿವರಿಸಲಾಗಿದೆ. ಇನ್ನು ಕಲಿಯುಗ ಆರಂಭವಾಗುವ ಕಾಲಘಟ್ಟದಲ್ಲಿ ವಿಮಾನಗಳಿಗೆ ಎಂಜಿನ್ಗಳು ಇದ್ದವು ಎಂದು ಹೇಳಲಾಗುತ್ತದೆ. “ಯಂತ್ರಕಲ್ಪತರು” ಎನ್ನುವ ಗ್ರಂಥದಲ್ಲಿ ಸೌರ ಶಕ್ತಿ, ವಿದ್ಯುತ್ ಶಕ್ತಿ ಹಾಗೂ ತಾಪಯಂತ್ರಗಳ ಕುರಿತು ಉಲ್ಲೇಖವಿದೆ. ವಿದ್ಯುಚ್ಛಕ್ತಿಯನ್ನು ತಯಾರು ಮಾಡಲಿಕ್ಕೆ 32 ಕ್ಕಿಂತಲೂ ಹೆಚ್ಚು ಯಂತ್ರಗಳಿದ್ದವು ಎಂದು ಹೇಳಲಾಗುತ್ತದೆ ಹಾಗೂ “ಲೋಹ ಸರ್ವಸ್ವ” ಎನ್ನುವ ಗ್ರಂಥದಲ್ಲಿ ಹಲವಾರು ಬೇರೆ ಬೇರೆ ರೀತಿಯ ಖನಿಜಗಳನ್ನು ಉಪಯೋಗಿಸಿ ಮಿಶ್ರಣ ಮಾಡಿ ವಿಮಾನಕ್ಕೆ ಇಂಧನವನ್ನು ತಯಾರಿಸುವ ಬಗ್ಗೆ ವಿವರಿಸಲಾಗಿದೆ. ಕ್ರೌಂಚ ಲೋಹವನ್ನು ವಿಮಾನದ ಮೆಲ್ತುದಿಗೆ ಉಪಯೋಗಿಸಿ ವಿಮಾನವನ್ನು ಸಿಡಿಲು ನಿರಿಧಕವನ್ನಾಗಿ ಮಾಡಲಾಗುತ್ತಿತ್ತು. ಮಹರ್ಷಿ ಭರದ್ವಾಜ್ ಅವರ ಪ್ರಕಾರ ವಿಮಾನ ಎಂದರೆ “ವೇಗ ಸಾಮ್ಯಾತ್ ವಿಮಾನೋ ಅಂಡಾಜಾನಾಂ” ಎಂದು ಹೇಳುತ್ತಾರೆ. ಇದರ ಅರ್ಥ ಪಕ್ಷಿಗಳಂತೆ ಹಾರಾಡುವ ವಾಹನಗಳು ಎಂದಾಗುತ್ತದೆ ಹಾಗೂ ವೈಮಾನಿಕ ಶಾಸ್ತ್ರದಲ್ಲಿ ಪೈಲೆಟ್ಟುಗಳನ್ನು ರಹಸ್ಯ ಜ್ಞಾನೋಧಿಕಾರಿ ಎಂದು ಹೇಳುತ್ತಾರೆ ಹಾಗೂ ಪೈಲೆಟ್ಟುಗಳಿಗೆ ವಿಮಾನವನ್ನು ಹೇಗೆ ಹಾರಿಸಬೇಕು, ಪೈಲೆಟ್ಟುಗಳು ಅರಿಯಬೇಕಾದ 32 ರಹಸ್ಯಗಳ ಕುರಿತು, ಅವರ ದಿನಚರಿ, ಆಹಾರ ಪದ್ಧತಿ ಹಾಗೂ ವಸ್ತ್ರ ವಿನ್ಯಾಸಗಳ ಕುರಿತು “ರಹಸ್ಯ ಲಹರಿ” ಎನ್ನುವ ಗ್ರಂಥದಲ್ಲಿ ವಿವರಿಸಲಾಗಿದೆ. ಇನ್ನು ವಿಶಿಷ್ಟವಾದ ಪಾದರಸದ( mercury vertex engine) ಎಂಜಿನ್ಗಳನ್ನು ಕಲಿಯುಗ ಆರಂಭವಾಗುವ ಕಾಲಘಟ್ಟದಲ್ಲಿ ವಿಮಾನಗಳಿಗೆ ಅಳವಡಿಸಲಾಗುತ್ತಿತ್ತು ಎಂಬುದರ ಕುರಿತು ಪ್ರಾಚೀನ ದಾಖಲೆಗಳಿವೆ. ಸುಬ್ಬರಾಯ ಶಾಸ್ತ್ರಿಗಳ “ಮಹರ್ಷಿ ಭರದ್ವಾಜ್ ವಿರಚಿತ ವೈಮಾನಿಕ ಶಾಸ್ತ್ರ” ಪುಸ್ತಕದಲ್ಲೂ ಪಾದರಸದ ಎಂಜಿನ್ ಕುರಿತು ವಿವರಣೆ ಇದೆ ಹಾಗೂ 1970 ರ ದಶಕದಲ್ಲಿ ನಾಸಾ ಸಂಸ್ಥೆಯವರು ಇದೇ ಪುಸ್ತಕವನ್ನು 160 ಡಾಲರ್ ದುಡ್ಡು ಕೊಟ್ಟು ಕೊಂಡು ಸವಿಸ್ತಾರವಾಗಿ ಅಧ್ಯಯನ ಮಾಡಿ ಪಾದರಸದ ಇಂಜಿನನ್ನು ಸಂಶೋಧನೆ ಮಾಡಿದರು ಹಾಗೂ ಪ್ರಾಚೀನ ಭಾರತೀಯರಿಗೆ ಗೊತ್ತಿದ್ದ ಪಾದರಸದ ಎಂಜಿನ್ (Mercury vertex engine) ಅತ್ಯಂತ ಕಾರ್ಯದಕ್ಷತೆ ಉಳ್ಳದ್ದು ಎಂದು ನಾಸಾ ಸಂಸ್ಥೆ ಒಪ್ಪಿಕೊಂಡಿದೆ. ಜಗತ್ಪ್ರಸಿದ್ಧ ಈ ನಾಸಾ ಸಂಸ್ಥೆಯು ಇವತ್ತು ತನ್ನ ಸ್ಪೇಸ್ ವೆಹಿಕಲ್ಗಳಿಗೆ ಇದೇ ಪಾದರಸ ಎಂಜಿನ್ ಅನ್ನು ಅಳವಡಿಸಿ ಸೌರಮಂಡಲದ ಅಧ್ಯಯನಕ್ಕೆ ಸ್ಪೇಸ್ ವೆಹಿಕಲ್ಗಳನ್ನು ನಾಸಾ ಕಳಿಸುತ್ತದೆ. ಈ ಎಲ್ಲ ತಂತ್ರಜ್ಞಾನವು ಯಾರೋ ಒಬ್ಬರ ಕಪೋಕಲ್ಪಿತ ಕಲ್ಪನೆಗಳು ಅಲ್ಲವೇ ಅಲ್ಲ. ಎಲ್ಲದಕ್ಕೂ ಪ್ರಾಚೀನ ಭಾರತದ ಗ್ರಂಥಗಳಲ್ಲಿ ಆಧಾರ ಇದೆ. ಆದರೆ ಇಲ್ಲಿರುವ ಎಡಪಂಥೀಯರು ಇದೆಲ್ಲ ಸುಳ್ಳು ಎಂದು ಹಾಸ್ಯಾಸ್ಪದವಾಗಿ ಮಾತನಾಡುತ್ತಿದ್ದಾರೆ, ವಿವಾದಾತ್ಮಕ ವಿವಾದಗಳನ್ನು, ಕಮೆಂಟ್ಸ್ಗಳನ್ನು ಮಾಡುತ್ತಿದ್ದಾರೆ ಆಕಡೆ ಪಾಶ್ಚಿಮಾತ್ಯ ರಾಷ್ಟ್ರದ ಡೇವಿಡ್ ಹ್ಯಾಚರ್ ಚಿಲ್ಡ್ರೆಸ್ ಎನ್ನುವ ವಿಜ್ಞಾನಿ ಈ ತರದ ಯಂತ್ರಗಳಿದ್ದ ಸಾಧ್ಯತೆಯನ್ನು ತಮ್ಮ ಪ್ರಯೋಗಗಳಿಂದ ಪುಷ್ಟೀಕರಿಸುತ್ತಾರೆ. ಅಮೆರಿಕಾದ Area 51 ಮತ್ತು ನಾಸಾ ಸಂಸ್ಥೆಯಿಂದ ಹಿಡಿದು ಜರ್ಮನ್, ರಷ್ಯಾ, ಮುಂತಾದ ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದ ಪ್ರಾಚೀನ ಜ್ಞಾನ ಭಂಡಾರದ ಸಾಮರ್ಥ್ಯವನ್ನು ಒಪ್ಪಿಕೊಂಡು ಪ್ರಾಚೀನ ಭಾರತದ ಗ್ರಂಥಗಳ ಅಧ್ಯಯನದಲ್ಲಿ ನಿರತವಾಗಿವೆ.

ಇನ್ನು ಕೃತಾಯುಗದಲ್ಲಿ ಧರ್ಮವು ಜಗತ್ತಿನ ಎಲ್ಲ ಕಡೆ ದೃಢವಾಗಿ ನೆಲೆಸಿತ್ತು ಹಾಗೂ ಎಲ್ಲರೂ ದೈವೀ ಶಕ್ತಿಗಳನ್ನು ಪಡೆದುಕೊಂಡು ದೈವಾಂಶಸಂಭೂತರಾಗಿದ್ದರು. ಕೃತಯುಗದಲ್ಲಿ ಬಹಳಷ್ಟು ಜನರು ಅನಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಸ್ವರ ಮತ್ತು ವಶಿತ್ವ ಎಂಬ ವಿಶಿಷ್ಟ ಶಕ್ತಿಗಳನ್ನು ಪಡೆದುಕೊಂಡಿದ್ದರು ಹಾಗೂ ಇವುಗಳ ಅರ್ಥವು ಕ್ರಮವಾಗಿ ಅನಂತ ರೂಪ ಹೊಂದುವುದು, ಬೃಹದಾಕಾರದ ರೂಪ ಹೊಂದುವುದು, ಭಾರವಾಗುವುದು, ಹಗುರವಾಗುವದು, ಬಯಸಿದ್ದನ್ನು ಪಡೆಯುವುದು, ಕಾಮನೆಗಳಿಂದ ಮುಕ್ತವಾಗುವುದು, ಸಾರ್ವಭೌಮತ್ವ ಪಡೆಯುವುದು ಹಾಗೂ ವಶಪಡಿಸಿಕೊಳ್ಳುವುದು ಎಂದಾಗುತ್ತದೆ. ಹೀಗೆ ಕೃತಯುಗದಲ್ಲಿ ಅಷ್ಟಶಕ್ತಿಗಳನ್ನು ಪಡೆದು ದೈವಿಸಂಭೂತರಾಗಿದ್ದರು ಹಾಗೂ ಈ ಅಷ್ಟಶಕ್ತಿಗಳಲ್ಲಿ ಒಂದಾದ ಲಘೀಮಾ ಶಕ್ತಿಯನ್ನು ಉಪಯೋಗಿಸಿ ದೇಹವನ್ನು ಗಾಳಿಗಿಂತ ಹಗುರವಾಗಿ ಮಾಡಿಕೊಂಡು ಮುಕ್ತವಾಗಿ ಆಕಾಶದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದರು ಎನ್ನಲಾಗುತ್ತದೆ. ಹೀಗಾಗಿ ಕೃತಯುಗದಲ್ಲಿ ವಿಮಾನಗಳ ಅವಶ್ಯಕತೆಯೇ ಇರಲಿಲ್ಲ ಎನ್ನಲಾಗುತ್ತದೆ. ಇನ್ನು “ವಿಮಾನ ಚಂದ್ರಿಕ” ಎನ್ನುವ ಗ್ರಂಥದ ಪ್ರಕಾರ ತ್ರೇತಾಯುಗದಲ್ಲಿ ಪ್ರಚಂಡ ಮಂತ್ರ ಶಕ್ತಿ ಸಾಧಕರು ಇದ್ದದ್ದರಿಂದ ಆ ಯುಗದ ವಿಮಾನಗಳನ್ನು ಮಾಂತ್ರಿಕ ವಿಮಾನಗಳು ಎಂದು ಹಾಗೂ ದ್ವಾಪರಯುಗದಲ್ಲಿ ತಾಂತ್ರಿಕ ಶಕ್ತಿಗಳ ಪ್ರಾಬಲ್ಯ ಇದ್ದದ್ದರಿಂದ ಆ ಯುಗದಲ್ಲಿನ ವಿಮಾನಗಳನ್ನು ತಾಂತ್ರಿಕ ಶಕ್ತಿ ಆಧಾರಿತ ವಿಮಾನಗಳು ಎಂದು ವಿಂಗಡಿಸಲಾಗಿದೆ. ಮಹರ್ಷಿ ಭರದ್ವಾಜ್ ಅವರ ಪ್ರಕಾರ ತ್ರೇತಾಯುಗದಲ್ಲಿ ಪುಷ್ಪಕ, ಅಜಮುಖ,ಬ್ರಜಾಸ್ವತ್, ಜ್ಯೋತಿರ್ಮುಖ, ವಜ್ರಾಂಗ, ಉಜ್ವಲ, ಕೋಲಾಹಲ, ಮಯೂರ, ತ್ರಿಪುರ, ವಸುಹಾರ, ಅಂಬರೀಶ, ಭೇರುಂಡ ಹೀಗೆ ಒಟ್ಟು 25 ವಿವಿಧ ವಿಮಾನಗಳು ಇದ್ದವು ಎನ್ನಲಾಗುತ್ತದೆ. ರಾವಣನ ಹತ್ತಿರ ಇದ್ದ ಪುಷ್ಪಕ ವಿಮಾನವು ಎಲ್ಲರಿಗೂ ಪರಿಚಿತವಾದದ್ದು. ಈ ಪುಷ್ಪಕ ವಿಮಾನಕ್ಕೆ ಯಾವುದೇ ಎಂಜಿನ್ ಇರಲಿಲ್ಲ. ಈ ಪುಷ್ಪಕ ವಿಮಾನವು ಕೇವಲ ಮನೋಬಲದಿಂದ ಉಂಟಾಗುವ ಜೈವಿಕ ಶಕ್ತಿಯ ಮೂಲಕ ಹಾರಾಟ ಮಾಡುತ್ತಿತ್ತು. ಇನ್ನು ದ್ವಾಪರಯುಗದಲ್ಲಿ ಮಹರ್ಷಿ ಗೌತಮರ ಪ್ರಕಾರ ಭೈರವ, ನಂದಕ, ವಟುಕ ತುಂಬರ, ಗಜಾಸ್ಯ, ಸೌವರ್ಣಿಕ, ಬೃಹತ್ಕುಂಜ, ವಿಷ್ಣುರಥ ಹೀಗೆ ಬೇರೆ ಬೇರೆ ರೀತಿಯ ಒಟ್ಟು 56 ವಿಮಾನಗಳು ಇದ್ದವು ಎನ್ನಲಾಗುತ್ತದೆ. ಇನ್ನು ಕಲಿಯುಗ ಆರಂಭವಾಗುವ ಕಾಲಘಟ್ಟದಲ್ಲಿ ಮಂತ್ರ ಮತ್ತು ತಂತ್ರ ಶಕ್ತಿಗಳು ನಶಿಸಿ ಹೋಗಲ್ಪಟ್ಟಿದ್ದರಿಂದ ಎಂಜಿನ್ ಅಳವಡಿಸಿದ ಶಕುನ, ಸುಂದರ, ಮಂಡಲ, ವಕ್ರತುಂಡ, ಪದ್ಮಕ, ಪುಷ್ಕರ, ಕೋದಂಡ ಹೀಗೆ 25 ರೀತಿಯ ಬೇರೆ ಬೇರೆ ರೀತಿಯ ಎಂಜಿನ್ ಹೊಂದಿದ ಕೃತಕ ವಿಮಾನಗಳ ತಂತ್ರಜ್ಞಾನ ಆರಂಭವಾಯಿತು ಎನ್ನಲಾಗುತ್ತದೆ.
ಪ್ರಾಚೀನ ಭಾರತದಲ್ಲಿದ್ದ ಇಂತಹ ಜ್ಞಾನ ಭಂಡಾರವು ದುರದೃಷ್ಟಕರವಾಗಿ ಕಾಲಘಟ್ಟ ಮುಂದೆ ಸಾಗಿದ ಹಾಗೆ ನಶಿಸುತ್ತಾ ಹೋಯಿತು. ಭೂಮಿಯ ಮೇಲೆ ಹೆಚ್ಚುಕಡಿಮೆ ಐದು ಲಕ್ಷ ವರ್ಷಗಳ ಹಿಂದಿನಿಂದ ಮಾನವ ನೆಲೆಸಿದ್ದಾನೆ. ಆದರೆ ಇವತ್ತು ನಮಗೆ 98% ಮಾನವನ ಇತಿಹಾಸ ಗೊತ್ತೇ ಇಲ್ಲ. ಆದರೂ ಪ್ರಸ್ತುತ ಕ್ಷಣದಲ್ಲಂತೂ ನಾವು ಜ್ಞಾನದ ಉತ್ತುಂಗದ ಹಂತಕ್ಕೆ ತಲುಪಿದ್ದೇವೆ ಎಂದು ಕೇವಲ ಕಲ್ಪನೆಯನ್ನು ಮಾಡಿಕೊಂಡಿದ್ದೇವೆ. ಪುರಾತನ ಕಾಲದಲದ ಭಾರತೀಯರು ಆಧ್ಯಾತ್ಮಿಕವಾಗಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇವತಿನಗಿಂತಲೂ ನೂರಾರು ಪಟ್ಟು ಅಧಿಕ ಮುನ್ನಡೆ ಇರುವ ಜ್ಞಾನವನ್ನು ಹೊಂದಿದ್ದರು. ಆದರೆ ದುರುದ್ದೇಶಪೂರಿತ ಶಕ್ತಿಗಳು ಪ್ರಾಚೀನ ಭಾರತದ ನಿಜವಾದ ಇತಿಹಾಸವನ್ನು ಹುನ್ನಾರದ ಮೂಲಕ ದಮನ ಮಾಡಿವೆ ಹಾಗೂ ನಾವು ಇವತ್ತಿನ ಶಿಕ್ಷಣ ವ್ಯವಸ್ಥೆಯ ಮೂಲಕ ಪ್ರಸ್ತುತ ವಿಜ್ಞಾನ ಮತ್ತು ತಂತ್ರಜ್ಞಾನವೇ ಅತ್ಯಂತ ಉನ್ನತವಾದದ್ದು ಎಂದು ಕಪೋಕಲ್ಪಿತ ಕಲ್ಪನೆಯನ್ನು ಮಾಡಿಕೊಂಡಿದ್ದೇವೆ. ಅದೃಷ್ಟವಶಾತ್ ಪ್ರಾಚೀನ ಭಾರತದ ಜ್ಞಾನವು ಎಷ್ಟು ಉನ್ನತವಾಗಿತ್ತು ಎಂಬುದು ಇವತ್ತು ಜಗತ್ತಿನ ಹಲವು ದೇಶಗಳ ಅರಿವಿಗೆ ಬರುತ್ತಿದೆ. ಬಹುಶಃ ಇದೇ ಕಾರಣಕ್ಕೆ ಅಮೆರಿಕಾದ ನಾಸಾ ಸಂಸ್ಥೆ ಹಾಗೂ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಾದ ಜರ್ಮನಿ, ಇಂಗ್ಲೆಂಡ್, ರಷ್ಯಾ, ಆಸ್ಟ್ರೇಲಿಯಾ ಸಂಸ್ಕೃತ ಕಲಿಯುತ್ತಿವೆ. ಅದು ಏನೇ ಇರಲಿ ಆದರೆ ದುರುದ್ದೇಶಪೂರಿತ ಶಕ್ತಿಗಳ ಕೈಗೆ ಸಿಕ್ಕು ದಮನವಾಗಿ ಹೋದ ಪ್ರಾಚೀನ ಭಾರತದ ಜ್ಞಾನವನ್ನು ಕಲಿತುಕೊಂಡು ಹಾಗೂ ಪ್ರಾಚೀನ ವೈಮಾನಿಕ ಶಾಸ್ತ್ರಕ್ಕೆ ಅನುಗುಣವಾಗಿ ವಿಮಾನವನ್ನು ನಿರ್ಮಾಣ ಮಾಡಿದರೆ ಯಾವುದೇ ಇಂಧನದ ಸಹಾಯವಿಲ್ಲದೆ ವಿಮಾನಯಾನ ಮಾಡಲು ಸಾಧ್ಯವಾಗುತ್ತದೆ ಎಂಬುದು ತ್ರಿಕಾಲದಲ್ಲೂ ಸತ್ಯವಾದದ್ದು.
Vashikaran 👇
ದಾಂಪತ್ಯದಲ್ಲಿ ಉಂಟಾದ ಮನಸ್ತಾಪಕ್ಕೆ ವಶೀಕರಣ
Auspicious symbols 👇