ಆಯುರ್ವೇದವೆಂಬದು ಶಕ್ತಿ ಹಾಗೂ ವಾತ-ಪಿತ್ತ-ಕಫ ಎಂಬ ತ್ಯಾಜ್ಯಗಳು ದೇಹದಲ್ಲಿ ಜೈವಿಕ ರಾಸಾಯನಿಕ ಕ್ರಿಯೆ ನಡೆಯುವಾಗ ಉಂಟಾಗುತ್ತವೆ. ಇವುಗಳ ಆಸಮತೋಲನವಾದರೆ ದೇಹದಲ್ಲಿ ರೋಗಗಳು ಕಾಣಿಸಿಕೊಳ್ಳುತ್ತವೆ. ದೇಹವು ಪಂಚಮಹಾಭೂತಗಳಾದ ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶದಿಂದ ಸಯೋಜನೆ ಆಗಲ್ಪಟ್ಟಿರುತ್ತದೆ ಎಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ. ಈ ಪಂಚಮಹಾಭೂತಗಳು ಜೈವಿಕ ವ್ಯವಸ್ಥೆಯಲ್ಲಿ ಸಂವಹನ ನಡೆಸುವಾಗ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ತ್ರಿದೋಷಗಳೆಂದು ಹೇಳಲಾಗುತ್ತದೆ. ಈ ತ್ರಿದೋಷಗಳನ್ನು ವಾತ, ಪಿತ್ತ ಮತ್ತು ಕಫವೆಂದು ವಿಂಗಡಿಸಲಾಗಿದೆ. ವಿದ್ಯುತ್ ತಂತಿಯಲ್ಲಿ ಹರಿಯುವಾಗ ತಂತಿಯ ಜೊತೆಗೆ ವಿದ್ಯುತ್ ಸಂವಹನಗೊಂಡಾಗ ತಂತಿಯಲ್ಲಿ ವಿದ್ಯುತ್ಕಾಂತೀಯ, ಶಾಖ ಶಕ್ತಿಯ, ಹಾಗೂ ರಾಸಾಯನಿಕ ಪ್ರಭಾವ ಉಂಟಾಗುತ್ತದೆ. ವಿದ್ಯುತ್ಕಾಂತಿಯ ಪ್ರಭಾವದಿಂದ ಫ್ಯಾನ್ ತಿರುಗುತ್ತದೆ. ಶಾಖ ಶಕ್ತಿಯ ಪ್ರಭಾವದಿಂದ ನೀರು ಕಾಯಸಲಾಗುತ್ತದೆ ಹಾಗೂ ಬುಲ್ಬ್ ಉರಿಸಲಾಗುತ್ತದೆ ಮತ್ತು ರಾಸಾಯನಿಕ ಪ್ರಭಾವದಿಂದ ಬ್ಯಾಟರಿ ಚಾರ್ಜ್ ಮಾಡಲಾಗುತ್ತೆದೆ. ವಿದ್ಯುತ್ ತಂತಿಯ ಜೊತೆಗೆ ಸಂವಹನಗೊಂಡಾಗ ಹೇಗೆ ವಿದ್ಯುತ್ಕಾಂತೀಯ, ಶಾಖ, ಮತ್ತು ರಾಸಾಯನಿಕ ಪ್ರಭಾವಗಳಾಗುತ್ತವೋ ಹಾಗೆ ಪಂಚಮಹಾಭೂತಗಳು ಜೈವಿಕ ವ್ಯವಸ್ಥೆಯ ಒಳಗೆ ಸಂವಹನಗೊಂಡಾಗ ವಾತ-ಪಿತ್ತ ಮತ್ತು ಕಫದ ಪ್ರಭಾವಗಳು ಉಂಟಾಗುತ್ತವೆ. ಇವನ್ನೇ ಆಯುರ್ವೇದ ತ್ರಿದೋಷಗಳೆಂದು ಕರೆಯುತ್ತದೆ.

ವಾತ ಅಂದರೆ ದೇಹದಲ್ಲಿ ಉಂಟಾಗುವ ಗ್ಯಾಸ್ ಅಥವಾ ಗಾಳಿ. ಪಿತ್ತ ಅಂದರೆ ದೇಹದಲ್ಲಿ ಉಂಟಾಗುವ ಉಷ್ಣಾಂಶ. ಇವತ್ತು ತುಂಬಾ ಹಿಟ್ ಆಗಿದೆ ಅಂತ ಹೇಳ್ತಿರ್ತೆವ್ ನೋಡಿ. ತ್ರಿದೋಷಗಳಲ್ಲಿ ಒಂದಾದವು ಈ ಪಿತ್ತದ ಸಮತೋಲನ ತಪ್ಪಿದರೆ ದೇಹವು ಹಿಟ್ ಆಗಿ ಬಿಡುತ್ತದೆ. ಹಾಗೂ ಕಫ ಅಂದರೆ ದೇಹದಲ್ಲಿ ಉಂಟಾಗುವ ನೀರು ಅಥವಾ ದ್ರವ ಎಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ. ಪಂಚಮಹಾಭೂತಗಳು ಜೈವಿಕ ವ್ಯವಸ್ಥೆಯಲ್ಲಿ ಸಂವಹನಗೊಳ್ಳುತ್ತಿರುವಾಗ ದೇಹದಲ್ಲಿ ಜೈವಿಕ ರಸಾಯನ ಕ್ರಿಯೆ ನಡೆದು ಉಂಟಾಗುವ ಈ ತ್ರಿದೋಷಗಳ ಸಮತೋಲನ ಸರಿಯಾಗಿ ಇರಲೇಬೇಕು. ಈ ಸಮತೋಲನ ತಪ್ಪಿದರೆ ದೇಹದಲ್ಲಿ ಉಂಟಾಗುವ ದೋಷಯುಕ್ತ ಸ್ಥಿತಿಯನ್ನು ರೋಗ ಎಂದು ಗುರತಿಸಲಾಗುತ್ತದೆ.

ಆಯುರ್ವೇದವೆಂಬದು ಶಕ್ತಿ ಹಾಗೂ ವಾತ-ಪಿತ್ತ-ಕಫ

ರೋಗದಿಂದ ಬಳಲುವಾಗ ದೇಹದಲ್ಲಿ ಉಲ್ಬಣಗೊಂಡ ರೋಗ ಲಕ್ಷಣಗಳ ಆಧಾರದಿಂದ ಅಷ್ಟೇ ಅಲ್ಲ ಅದರ ಜೊತೆ ಜೊತೆಯಾಗಿ ರೋಗಿಯ ಶಾರೀರಿಕ ಶಕ್ತಿ, ಆತ್ಮಶಕ್ತಿ, ಮನೋಭಾವ, ವಾತ, ಪಿತ್ತ, ಕಫ, ಮಲದೋಷ ಹಾಗೂ ಧಾತವಿನ ಶಕ್ತಿಯನ್ನು ಪರಿಗಣಿಸಿ ಆಯುರ್ವೇದದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇಡೀ ಜಗತ್ತಿಗೆ ಭಾರತವು ಆಯುರ್ವೇದ ಶಾಸ್ತ್ರವನ್ನು ಪರಿಚಯಿಸಿತು. ಭಗವತ್ ಪುರಾಣದ ಪ್ರಕಾರ ಭಗವಾನ್ ವಿಷ್ಣುವಿನಿಂದ ವಾರಣಾಸಿ ನಗರದಲ್ಲಿ ಸುಶೃತ ಋಷಿಗಳಿಗೆ ಆಯುರ್ವೇದ ಶಾಸ್ತ್ರವು ಕಥಾ ರೂಪದಲ್ಲಿ ಉಪದೇಶಿಸಲ್ಪಟ್ಟಿತು. ಕಥಾ ರೂಪದಲ್ಲಿದ್ದ ಬೋದಿಸಲ್ಪಟ್ಟ ಆಯುರ್ವೇದ ಶಾಸ್ತ್ರವು ಕಟ್ಟಕಡೆಗೆ ಸುಶೃತ ಋಷಿಗಯಿಂದ ಸುಶೃತ ಸಂಹಿತೆವೆಂಬ ಗ್ರಂಥವಾಗಿ ಬರೆಯಲ್ಪಟ್ಟಿತು. ಇವತ್ತಿನ ಇಡೀ ಆಯುರ್ವೇದ ಶಾಸ್ತ್ರಕ್ಕೆ ಸುಶೃತ ಸಂಹಿತೆವೇ ಮೂಲಾಧಾರ. ಸಂಸ್ಕೃತ ಭಾಷೆಯಲ್ಲಿ ಇದ್ದ ಈ ಸುಶೃತ ಸಂಹಿತೆ ಗ್ರಂಥವು 130 ವರ್ಷಗಳ ಹಿಂದೆ ಅಂದ್ರೆ 1891ರಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಅನುವಾದಿಸಲ್ಪಟ್ಟಿತು.

ಆಯುರ್ವೇದವು ಎರಡು ಶಬ್ದಗಳ ಸಂಯೋಗದಿಂದಾಗಿದೆ. ಆಯುವ(Life)+ವೇದ(knowledge)=ಆಯುರ್ವೇದ. ಆಯುರ್ವೇದ ಶಾಸ್ತ್ರದ ಪ್ರಕಾರ ನಮ್ಮ ಆಹಾರ ಪದ್ಧತಿಯು ಅತ್ಯಂತ ಮಹತ್ವಪೂರ್ಣವಾದದ್ದು. ಋಗ್ವೇದದಲ್ಲಿ, ಪುರಾಣಗಳಲ್ಲಿ, ಉಪನಿಷತ್ತುನಲ್ಲಿ ಆಹಾರವೇ ಜೀವನ ಎನ್ನಲಾಗಿದೆ. ನಾವು ತಿನ್ನುವ ಆಹಾರವು ನಮ್ಮ ದೇಹದ ಮೇಲೆ ಅಷ್ಟೇ ಅಲ್ಲ ಮನಸ್ಸಿನ ಮೇಲೂ ಪ್ರಭಾವ ಬೀರುತ್ತದೆ. ಆಹಾರ ಸೇವನೆ ಕೇವಲ ರುಚಿ ಆಧಾರಿತವಾಗಿ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಕೋನದಿಂದ ಸೇವಿಸಿದರೆ ಖಂಡಿತವಾಗಿ ರೋಗಗಳು ಹತ್ತಿರ ಸುಳಿಯಲಾರವು. ಜೀವನಕ್ಕಾಗಿ ತಿನ್ನಬೇಕು ವಿನಃ ತಿನ್ನಲಿಕ್ಕಾಗಿ ಬದುಕಬಾರದು. ಆಹಾರವನ್ನು ಹಿತವಾಗಿ ಮಿತವಾಗಿ ಮತ್ತು ಋತುಮಾನಕ್ಕೆ ಅನುಗುಣವಾಗಿ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ. ಇಲ್ಲದಿದ್ದರೆ ಅನೇಕ ರೋಗರುಜಿನಗಳಿಗೆ ತುತ್ತಾಗಬೇಕಾಗುತ್ತದೆ. ಚರಕ ಋಷಿಯೂ ಬರೆದಿರುವ ಆದರ್ಶ ಆಹಾರ ಸಂಹಿತೆಯಲ್ಲಿ ಆಹಾರ ಸೇವನೆಯ ಅನೇಕ ವಿಷಯಗಳನ್ನು ತಿಳಿಸಿದ್ದಾರೆ.

ಸೂರ್ಯೋದಯಕ್ಕಿಂತ ಮುಂಚೆ ಹೇಳುವುದು, ಮಲಮೂತ್ರ ವಿಸರ್ಜನೆ, ದಂತ ಶುದ್ಧಿ, ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು, ಯೋಗ ಮತ್ತು ಧ್ಯಾನದ ಕುರಿತು, ಹಾಗೂ ರಾತ್ರಿ ವೇಳೆಯಲ್ಲಿ ಮಲಗುವ ಮತ್ತು ಆಹಾರ ಸೇವನೆ ಮಾಡುವ ವಿಧಾನವನ್ನು ಆಯುರ್ವೇದದಲ್ಲಿ ವಿವರಿಸಲಾಗಿದೆ. ಅಷ್ಟೆ ಅಲ್ಲ ಸಂತೋಷಕರವಾದ ಹಾಗೂ ಆರೋಗ್ಯಕರವಾದ ಜೀವನಕ್ಕಾಗಿ ಅರ್ಥ, ಕಾಮ,ಮೋಕ್ಷದ ಉಲ್ಲೇಖವವೂ ಆಯುರ್ವೇದದಲ್ಲಿದೆ. ಋಣಾತ್ಮಕ ಭಾವನೆಗಳಿಂದ, ಆಲೋಚನೆಳಿಂದ ದೂರವಿದ್ದು ಪಂಚೇಂದ್ರಿಯಗಳ ಮೇಲೆ ಹಿಡಿತ ಸಾಧಿಸಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಎಲ್ಲವಿಚಾರಗಳನ್ನು ಆಯುರ್ವೇದ ಶಾಸ್ತ್ರದಲ್ಲಿ ತಿಳಿಸಲಾಗಿದೆ.

ಪ್ರಸ್ತುತವಾಗಿ ಅಲೋಪತಿ ಚಿಕಿತ್ಸಾ ವಿಧಾನ ಅತಿ ಹೆಚ್ಚು ಜನಪ್ರಿಯತೆ ಹೊಂದಿದೆ. ಆದರೆ ಅಲೋಪತಿ ಚಿಕಿತ್ಸಾ ವಿಧಾನದಿಂದ ಆಗುವ ಅನೇಕ ಅಡ್ಡಪರಿಣಾಮಗಳನ್ನು ನಾವು ಒಂದು ಸತಿ ವಿಶ್ಲೇಷಣೆ ಮಾಡಬೇಕು. ಜಗತ್ತಿನ ಅನೇಕ ರಾಷ್ಟ್ರಗಳು ಈಗಾಗಲೇ ಅಲೋಪತಿಯ ಅಡ್ಡಪರಿಣಾಮಗಳನ್ನು ಅರಿತು ಸನಾತನ ಆಯುರ್ವೇದ ಪದ್ಧತಿಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ ಹಾಗೂ ಆಯುರ್ವೇದ ಪರಂಪರೆ

ಯು ಅತಿ ಹೆಚ್ಚು ಪ್ರಾಚೀನ ಯಾವುದು ಶಾಶ್ವತ ಚಿಕಿತ್ಸಾ ವಿಧಾನ ಎಂದು ಇಡೀ ಜಗತ್ತು ಪರಿಗಣಿಸುತ್ತಿದೆ. ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಿಕೊಂಡು ಆಹಾರ ನಿಯಮಗಳನ್ನು ಅನುಸರಿಸಿದರೆ ವಾತ, ಪಿತ್ತ, ಮತ್ತು ಕಫ ಸಮತೋಲನಕ್ಕೆ ಬಂದು ಆದರ್ಶವಾದ ಆರೋಗ್ಯ ಲಭಿಸುವದರಲ್ಲಿ ಎರಡು ಮಾತಿಲ್ಲ. ಆಯುರ್ವೇದವೆಂಬದು ಶಕ್ತಿ ಹಾಗೂ ವಾತ-ಪಿತ್ತ-ಕಫದ ಕುರಿತು ಅರಿವು ಮೂಡಲಿ.

ಅಸ್ತಮಾ ಹಾಗೂ ಶ್ವಾಸಕೋಶದ ಫೈಬ್ರೋಸಿಸ್‌ 👇

https://anveshana.in/pulmonary-fibrosis/

ಮಣ್ಣಿನ ಮಡಿಕೆಗಳಲ್ಲಿ ನೀರು ಶ್ರೇಷ್ಠವಾದದ್ದು👇

https://www.facebook.com/share/p/1MFs6BAR5K/

Share.
Leave A Reply

You cannot copy content of this page

error: Content is protected !!
Exit mobile version